Monday, March 4, 2013
Friday, March 1, 2013
National Science Day: Dharwad District Unit
ವನಹಳ್ಳಿಯಲ್ಲಿ ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಯಶಸ್ವಿ
ಆಲೂಗಡ್ಡೆಯಿಂದ ವಿದ್ಯುತ್ ಉತ್ಪಾದಿಸುವ ಪ್ರಕ್ರಿಯೆಯೊಂದಿಗೆ ಮೇಳವನ್ನು ಉದ್ಘಾಟಿಸಿದ ಗ್ರಾಮದ ಶಿಕ್ಷಣ ಪ್ರೇಮಿ ಸಿದ್ದಪ್ಪ ವೆಂಕಪ್ಪ ಪ್ಯಾಟಿ ಮಕ್ಕಳಿಗೆ ರಾಷ್ಟ್ರೀಯ ದಿನಗಳ ಮಹತ್ವವನ್ನು ಚಟುವಟಿಕೆಯಾಧಾರಿತವಾಗಿ ಕಲಿಸುತ್ತಿರುವುದು ಶ್ಲಾಘನೀಯವಾಗಿದ್ದು ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವ ಮೂಡಿಸಲು ಮತ್ತು ಏಕೆ? ಏನು? ಹೇಗೆ? ಮುಂತಾದ ಪ್ರಶ್ನೆಗಳ ಮುಖೇನ ಮಕ್ಕಳನ್ನು ಕ್ರಿಯಾತ್ಮಕರನ್ನಾಗಿ ಮಾಡಲು ವಿಜ್ಞಾನ ಸಮಿತಿಯ ಕಾರ್ಯ ಕಾಯಕ ಶ್ಲಾಘನೀಯವಾಗಿದೆ ಎಂದರು.
ಕುಮಾರಿ ಪವಿತ್ರಾ ನಾವಳ್ಳಿ ಪರಿಸರ ಸ್ನೇಹಿ ಗ್ರಾಮದ ಮಾದರಿಯನ್ನು ವಿವರಿಸಿ ಅಚ್ಚರಿ ಮೂಡಿಸಿದಳು. ಕೈಬೆರಳಿನಿಂದ ಮಗ್ಗಿಗಳು, ದ್ವಿಮಾನದಿಂದ ದಶಮಾನ ಪದ್ಧತಿಗೆ ಪರಿವರ್ತನೆ ಮಾಯಾ ಚೌಕ ಗಣಿತದ ಮ್ಯೂಜಿಕ್ ಅಂಕಿಗಳು, ಲಿಫ್ಟನ ಮಾದರಿ, ರಾಕೇಟನ ಮಾದರಿ, ಖಾರ ಕುಟ್ಟುವ ಯಂತ್ರ, ಜೆ.ಸಿ.ಬಿ. ವಿದ್ಯುತ್ ರೈಲು ಮುಂತಾದ ವಿಜ್ಞಾನದ ಮತ್ತು ಗಣಿತದ ಮಾದರಿಗಳನ್ನು ಮಕ್ಕಳಿಗೆ ತಯಾರಿಸಿ ನೆರೆದ ಗ್ರಾಮಸ್ಥರಿಗೆ ವಿವರಿಸಿದ್ದು ಗ್ರಾಮದ ಜನರಿಗೆ ಅಚ್ಚರಿಯ ಜೊತೆಗೆ ಮಕ್ಕಳ ಕಲಿಕೆ ಸಾಧನೆ ಕುರಿತು iಕ್ಕಳು ಮತ್ತು ಶಿಕ್ಷಕರನ್ನು ಹಾಡಿ ಹೊಗಳಿದರು.
ಎಸ್.ಡಿ.ಎಂ.ಸಿ. ಅಧ್ಯಕ್ಷರಾದ ಶ್ರೀಮತಿ ವಿಜಯಲಕ್ಷ್ಮೀ ನಾವಳ್ಳಿ ಇವರ ಅಧ್ಯಕ್ಷತೆಯಲ್ಲಿ ಜರುಗಿದ ಈ ಮೇಳದಲ್ಲಿ ಮುಖ್ಯ ಅತಿಥಿಗಳಾಗಿ ಎಲ್.ಆಯ್.ಲಕ್ಕಮ್ಮನವರ, ಅಶೋಕ ನಾವಳ್ಳಿ, ಎಮ್.ಎಚ್.ಹೊನ್ನಕೊರೆನ್ನವರ, ನೀಲಪ್ಪ ಹೊಳೆಬಸಣ್ಣವರ, ಪಂಚಯ್ಯ ಹಿರೇಮಠ, ಶಿವಾನಂದ ಬಡಿಗೇರ, ಬಸಪ್ಪ ಹೆಬ್ಬಳ್ಳಿ ಮುಂತಾದವರು ಹಾಜರಿದ್ದ ಈ ಕಾರ್ಯಕ್ರಮದ ಆರಂಭದಲ್ಲಿ ಯೋಗೇಶ.ಜಿ. ಸ್ವಾಗತಿಸಿದರು. ಕೆಜೆವಿಎಸ್ ಕಾರ್ಯದರ್ಶಿ ಬಸವರಾಜ ಕರೂರ ನಿರೂಪಿಸಿದರು. ಬಿ.ವಾಯ್.ಬಿರುಕಲ್ ವಂದಿಸಿದರು.
Subscribe to:
Posts (Atom)