Thursday, April 10, 2014

World Health Day Program at Bijapur

“ಕಡಿತ ಚಿಕ್ಕದು; ಬೆದರಿಕೆ ದೊಡ್ಡದು”
ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ, ವಿಜಾಪುರ :
      ಅಂಜುಮನ್ ಶಿಕ್ಷಣ ಮಹಾವಿದ್ಯಾಲಯ ಹಾಗೂ ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ವಿಜಾಪುರ ಜಿಲ್ಲಾ ಘಟಕದ ಸಂಯುಕ್ತ ಆಶ್ರಯದಲ್ಲಿ ದಿನಾಂಕ :-08-04-2014 ರಂದು ಬಿ.ಡಿ.ಜತ್ತಿ ಹಿಂದಿ ಬಿ.ಈಡಿ.ಶಿಕ್ಷಣ ಮಹಾವಿದ್ಯಾಲಯದಲ್ಲಿ “ವಿಶ್ವ ಆರೋಗ್ಯ ದಿನಾಚರಣೆ” ಅಂಗವಾಗಿ ತಾಲೂಕಾ ಆರೋಗ್ಯ ಅಧಿಕಾರಿಗಳಾದ ಡಾ.ಈರಣ್ಣ ಎಸ್. ದಾರವಾಡಕರ ಇವರ ಉಪನ್ಯಾಸ ಏರ್ಪಡಿಸಲಾಗಿತ್ತು.

    ವಿಶ್ವ ಆರೋಗ್ಯ ಸಂಸ್ಥೆ ಬೆಳೆದುಬಂದ ರೀತಿಯನ್ನು ವಿವರಿಸುತ್ತ ಈ ಸಲದ ಸ್ಲೋಗನ್ ‘ಕಡಿತ ಚಿಕ್ಕದು ಬೆದರಿಕೆ ದೊಡ್ಡದು’ ಎಂದು ತಿಳಿಸಿ, ಮೂರು ತರ ಸೊಳ್ಳೆ ಕಡಿದರೆ ಐದುರೋಗಗಳಾದ ಮಲೇರಿಯಾ, ಡೆಂಗ್ಯೂ, ಮೆದುಳು ಜ್ವರ, ಆನೆಕಾಲು ರೋಗ, ಚಿಕನ್ ಗುನ್ಯ ಬರುತ್ತವೆಂದು ತಿಳಿಸಿದರು. ಸಿಹಿನೀರಿನಲ್ಲಿ ಬೆಳೆಯುವ ಸೊಳ್ಳೆ ಇಲಿಸಿಜಿಪ್ತ ಹಾಗೂ ಹೊಲಸು ನೀರಿನಲ್ಲಿ ಬೆಳೆಯವ ಸೊಳ್ಳೆ ಕ್ಯೂಲೆಕ್ಸ ಬಗ್ಗೆ ತಿಳಿಸುತ್ತಾ ಅವುಗಳಿಂದ ಹರಡುವ ರೋಗಗಳ ಬಗ್ಗೆ ವಿವರಣೆ ನೀಡಿ, ಮನೆ ಮುಂದೆ, ರಸ್ತೆಯ ಅಕ್ಕ ಪಕ್ಕದಲ್ಲಿ ನೀರು ನಿಲ್ಲದಂತೆ ಮುನ್ನೆಚ್ಚರಿಕೆವಹಿಸಬೇಕೆಂದು ಅಭಿಪ್ರಾಯಪಟ್ಟರು.
    ಡಾ.ಎಸ್.ಎ.ಬಿರಾದಾರ ತಾಲೂಕಾ ಆರೋಗ್ಯ ಅಧಿಕಾರಿಗಳು ವಿಜಾಪುರ ಇವರು ಮಾತನಾಡುತ್ತಾ, “ರೋಗ ಬಂದ ನಂತರ ಚಿಕಿತ್ಸೆ ಪಡೆಯುವದಕ್ಕಿಂತ ರೋಗ ಬಾರದಂತೆ ನೋಡಿಕೊಳ್ಳುವುದು ಸೂಕ್ತ” ಎಂದು ತಿಳಿಸಿದರು. ಪೋಲಿಯೊ,ಕಾಮಲೆ, ಟಿಬಿ,ಲೆಪ್ರೆಸಿ ಹೀಗೆ ಹಲವಾರು ರೋಗಗಳು ಬಾರದಂತೆ ನೋಡಿಕೊಳ್ಳುವುದೇ ವಿಶ್ವ ಆರೋಗ್ಯ ದಿನಾಚರಣೆಯ ಉದ್ದೇಶವಾಗಿದೆ ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ಜಿಲ್ಲಾ ಘಟಕ ಇಂತಹ ಮಹತ್ವದ ಕಾರ್ಯ ಮಾಡುತ್ತಿರುವುದು ಶ್ಲಾಘನೀಯ ಎಂದು ಮಚ್ಚುಗೆ ವ್ಯಕ್ತಪಡಿಸಿದರು.
    ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ಜಿಲ್ಲಾ ಘಟಕದ ಅಧ್ಯಕ್ಷರಾದ ಶ್ರೀ ಎಸ್.ವಿ.ಬುರ್ಲಿ ಇವರು ಉದ್ದೇಶ ಹಾಗೂ ಸಮಿತಿಯಿಂದ ನಡೆಯುತ್ತಿರುವ ಕಾರ್ಯಕ್ರಮಗಳ ಕುರಿತು ವಿವರಣೆ ನೀಡಿದರು. ಕಾರ್ಯಕ್ರಮದ ಸಂಘಟಕರಾದ ಶ್ರೀಮತಿ ಎನ್.ಎಮ್.ಪಾಠಾಣ ಇವರು ಆರೋಗ್ಯದ ಬಗ್ಗೆ ಗಮನ ಕೊಡುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಇಂತಹ ಕಾರ್ಯಕ್ರಮಗಳು ನಡೆಯುತ್ತಾ ಇರಬೆಕೆಂದು ತಮ್ಮ ಅಧ್ಯಕ್ಷೀಯ ನುಡಿಯಲ್ಲಿ ಹೇಳಿದರು.
    ಕಾರ್ಯದರ್ಶಿಗಳಾದ ಶ್ರೀ ಎಸ್.ಜಿ.ಕಾಂಬಳೆ ಹಾಗೂ ಸದಸ್ಯರು, ಅಂಜುಮನ ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯರಾದ ಶ್ರೀಮತಿ ಡಿ.ಎಚ್.ನದಾಫ್, ಸಂಯೊಜಕರಾದ ಶ್ರೀಮತಿ ಗುಡದೂರ, ಶ್ರೀ ಸಾರವಾಡ, ಉಪನ್ಯಾಸಕರು ಹಾಗೂ 90ಕ್ಕು ಹೆಚ್ಚು ಪ್ರಶಿಕ್ಷಣಾರ್ಥಿಗಳು ಕಾರ್ಯಕ್ರಮದಲ್ಲಿ ಪಾಲ್ಗೋಂಡಿದ್ದರು

-ಜಿ.ಎಸ್.ಕಾಂಬಳೆ (ಕಾರ್ಯದರ್ಶಿಗಳು), ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ಜಿಲ್ಲಾ ಘಟಕ

Monday, April 7, 2014

Science behind 'miracles'...

ಪವಾಡಗಳ ಹಿಂದೆ ಕೈಚಳಕ
ಮತ್ತು ವಿಜ್ಞಾನ ಅಡಗಿದೆ
-ರವಿ ದೇವರಡ್ಡಿ

ಗದಗ: ಕಷ್ಠದಲ್ಲಿರುವ ಜನರು ಪರಿಹಾರಕ್ಕಾಗಿ ದೇವರ ಬಳಿ ತೆರಳಿದಾಗ ಅಲ್ಲಿನ ಪೂಜಾರಿಗಳು, ಬಾಬಾಗಳು ಅವರನ್ನು ಪವಾಡದ ಹೆಸರಿನಲ್ಲಿ ಶೋಷಣೆ ಮಾಡುವುದು ಸಾಮಾನ್ಯವಾಗಿದೆ. ಪವಾಡಗಳು ಕೈಚಳಕ ಮತ್ತು ವಿಶೇಷ ವಸ್ತುಗಳನ್ನು ಬಳಸಿ ಜನರಿಗೆ ವಂಚಿಸಲು ಹಿಡಿದ ವಾಮ ಮಾರ್ಗವಾಗಿದೆ. ಇವುಗಳ ಹಿಂದೆ ಒಂದು ವೈಜ್ಞಾನಿಕ ತತ್ವ ಅಡಗಿದೆ ಎಂದು ಕರ್ನಾಟಕ ಜ್ಞಾನ-ವಿಜ್ಞಾನ ಸಮಿತಿಯ ರವಿ ದೇವರಡ್ಡಿ ತಿಳಿಸಿದರು.

ಅವರು ಸ.ಹಿ.ಪ್ರಾ.ಶಾಲೆ ಗುಜಮಾಗಡಿ ಹಾಗೂ ಕರ್ನಾಟಕ ಜ್ಞಾನ-ವಿಜ್ಞಾನ ಸಮಿತಿ ಜಿಲ್ಲಾ ಘಟಕ ಗದಗ ಇವುಗಳ ಸಂಯುಕ್ತ ಆಶ್ರಯದಲ್ಲಿ ಏರ್ಪಡಿಸಿದ್ಧ ಪವಾಡ ಬಯಲು ಕಾರ್ಯಕ್ರಮದಲ್ಲಿ, ಮುಖ್ಯ ಅತಿಥಿಯಾಗಿ ಪಾಲ್ಗೋಂಡು ಮಾತನಾಡುತ್ತಿದ್ದರು.


ಮುಂದುವರೆದು ಮಾತನಾಡಿ ದುರ್ಬಲ ಮನಸ್ಸಿನ ಮಹಿಳೆಯರು ಮತ್ತು ಮಕ್ಕಳನ್ನೆ ಗುರಿಯಾಗಿರಿಸಿ ಕೊಂಡ ಬೂದಿ ಬಾಬಾಗಳು ಅನೇಕ ರೀತಿಯ ಕೈಚಳಕಗಳಿಂದ ನಿತ್ಯ ಸಮಾಜದ ಶೋಣೆಗೆ ನಿಂತಿದ್ದಾರೆ.ಸಮೂಹ ಮಾಧ್ಯಮಗಳು ಅನೇಕ ಸಂದರ್ಭಗಳಲ್ಲಿ ಇವುಗಳ ವಿಶ್ಲೇಷಣೆ ಮಾಡದೆ, ಪದೆ ಪದೆ ಬಿತ್ತರಿಸಿ ಡೋಂಗಿ ಬಾಬಾಗಳಿಗೆ ಪ್ರಚೋದನೆ ನಿಡುತ್ತಿರುವುದು ವಿಷಾದನೀಯ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಖಾಲಿ ಕೈಯಲ್ಲಿ ಬೂದಿ ಬರಿಸುವುದು, ತುಂಡಾದ ಹಗ್ಗವನ್ನು ಮಂತ್ರ ಶಕ್ತಿಯಿಂದ ಜೋಡಿಸುವದು, ಡಬ್ಬಿಯಲ್ಲಿ ಮುಚ್ಚಿಟ್ಟ ಸಂಖ್ಯೆ ಹೇಳುವುದು, ಮೈಗೆ ಬೆಂಕಿ ಹಚ್ಚಿಕೊಳ್ಳುವುದು, ಕೈಯಲ್ಲಿ ಕರ್ಪೂರ ಉರಿಸಿಕೊಳ್ಳುವುದು, ನೀರಿನಿಂದ ಬೆಂಕಿ ಹಚ್ಚುವುದು,ನೀರಿನಿಂದ ದೀಪ ಬೆಳಗಿಸುವುದು ಮುಂತಾದ ಪವಾಡಗಳ ಕೈಚಳಕವನ್ನು ಮಾಡಿ ತೋರಿಸಲಾಯಿತು.


ಸಮಾರಂಭದ ಅಧ್ಯಕ್ಷತೆಯನ್ನು ಶಾಲೆಯ ಎಸ್.ಡಿ.ಎಮ್.ಸಿ.ಅಧ್ಯಕ್ಷರಾದ ಕೆ.ತಳವಗೇರಿ ವಹಿಸಿದ್ದರು. ವೇದಿಕೆಯ ಮೇಲೆ ಪ್ರಧಾನ ಗುರುಮಾತೆ ಎಸ್.ಪಿ.ಹೂಗಾರ, ಶಿಕ್ಷಕರಾದ ಬಿ.ಎಲ್.ಕುಂಬಾರ,ಎಸ್.ಬಿ.ಕನ್ನಿಕೆ, ಪಿ.ಕೆ.ಬಗಾಡೆ, ಭಾಗವಹಿಸಿದ್ದರು. ಎಸ್.ಕೆ. ಮಠಪತಿ ಕಾರ್ಯಕ್ರಮ ನಿರೂಪಿಸಿ,ಎಮ್.ಆರ್.ಕಲ್ಗುಡಿ ವಂದಿಸಿದರು.

Friday, April 4, 2014

Program about Scientific Temper at Bijapur


“ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಮನೋಭಾವ ಬೆಳಸಿ”

‘ರಾಷ್ಟೀಯ ವಿಜ್ಞಾನ ದಿನಾಚರಣೆಯ’ ಅಂಗವಾಗಿ ದಿನಾಂಕ : 09-03-2014 ರಂದು ನಗರದ ಪ್ರತೀಷ್ಠಿತ ಸಂಸ್ಥೆಗಳಲ್ಲೊಂದಾದ ಚೇತನಾ ಬಿ.ಬಿ.ಎ., ಬಿ.ಸಿ.ಎ., ವಿಜ್ಞಾನ ಪದವಿಪೂರ್ವ ಮಹಾವಿದ್ಯಾಲಯದಲ್ಲಿ ‘ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ, ಬಿಜಾಪುರ ಜಿಲ್ಲಾ ಘಟಕ’ ದ ವತಿಯಿಂದ ‘ಮೂಢನಂಬಿಕೆ’ ಕುರಿತು ವಿಚಾರ ಸಂಕಿರಣ ಕಾರ್ಯಕ್ರಮ ಏರ್ಪಡಿಸಲಾಗಿತ್ತು. 




ಈ ಕಾರ್ಯಕ್ರಮದಲ್ಲಿ ಅತಿಥಿ ಉಪನ್ಯಾಸಕರಾಗಿ ಆಗಮಿಸಿದ ಶ್ರೀ ಎಸ್.ಬಿ.ಕಲ್ಯಾಣಿ ಉಪನ್ಯಾಸಕರು ಸರಕಾರಿ ಪ.ಪೂ.ಮಹಾವಿದ್ಯಾಲಯ ಮಮದಾಪುರ ಇವರು ಮೂಢನಂಬಿಕೆ ಕುರಿತು ಮಾತನಾಡುತ್ತ ನಂಬಿಕೆ ಹಾಗೂ ಮೂಢನಂಬಿಕೆ ವ್ಯತ್ಯಾಸ ಅರಿತುಕೊಳ್ಳಬೆಕೆಂದು ತಿಳಿಸಿದರು. ಶ್ರೀಎಸ್.ಕೆ.ಚಿಕರಡ್ಡಿ ನಿವೃತ್ತ ಮುಖ್ಯೋಪಾಧ್ಯಾಯರು ಮಾತನಾಡಿ ಕೇವಲ ವಿಜ್ಞಾನ ಶಿಕ್ಷಕರಿಗೆ ಮಾತ್ರ ಈ ಕಾರ್ಯಕ್ರಮ ಸೀಮಿತವಾಗಿರದೆ ಎಲ್ಲರೂ ಭಾಗವಹಿಸುವಂತಾಗಬೇಕು. ಬಸವಣ್ಣನವರು ಹೇಳಿದಹಾಗೆ ‘ನುಡಿದಂತೆ ನಡೆ’ ಎಂಬಂತೆ ಕೇವಲ ಮಾತನಾಡಿದರೆ ಸಾಲದು ನಮ್ಮನಿತ್ಯ ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ತಮ್ಮ ಜೀವನದ ದೃಷ್ಠಾಂತದೊಂದಿಗೆ ವಿವರಿಸಿದರು. ಶ್ರೀ ಎಮ್ ಓ. ಶಿರೂರ ಉಪನ್ಯಾಸಕರು, ಪಾಟೀಲ ಪ.ಪೂ.ಮಹಾವಿದ್ಯಾಲಯ ಮನಗೂಳಿ ಇವರು ಮಾತನಾಡುತ್ತ ವಿಜ್ಞಾನ ಇಷ್ಟು ಮುಂದುವರೆದಿದ್ದರೂ ಇನ್ನೂ ಹಲವೆಡೆ ಅವೈಜ್ಞಾನಿಕತೆಯಿಂದ ಕೂಡಿದ ಜನರಿಗೆ ಮೂಢನಂಬಿಕೆ ಹೋಗಲಾಡಿಸುವ  ವಿಚಾರಗಳು ತಲುಪುವಂತಾಗಬೇಕೆಂದರು.
ಮುಖ್ಯ ಅತಿಥಿಯಾಗಿ ಆಗಮಿಸಿದ ಸಾರ್ವಜನಿಕ ಶಿಕ್ಷಣ ಇಲಾಖೆಯ ವಿಜ್ಞಾನ ವಿಷಯ ಪರಿವೀಕ್ಷಕರಾದ ಶ್ರೀಮತಿ ಎಸ್.ವ್ಹಿ.ಹಂದಿಗೋಳ ಇವರು ಮಾತನಾಡುತ್ತ ಇಂದಿನ ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಮನೋಭಾವ ಬೆಳೆಸುವಲ್ಲಿ ಶಿಕ್ಷಕರ ಪಾತ್ರ ಬಹಳ ಮಹತ್ವದ್ದಾಗಿದೆ, ಕೇವಲ ಪಠ್ಯವಸ್ತುವಿನಲ್ಲಿರುವ ವಿಷಯವನ್ನು ಉಪನ್ಯಾಸದ ಮೂಲಕ ಹೇಳದೆ ಹಲವಾರು ಪ್ರಯೋಗಗಳ ಮೂಲಕ ತಿಳಿಸಿದರೆ ಮಕ್ಕಳು ಆಸಕ್ತಿಯಿಂದ ಕಲಿಯಲು ಹಾಗೂ ವೈಜ್ಞಾನಿಕ ಮನೋಭಾವ ಬೆಳೆಸಿಕೊಳ್ಳಲು ಸಾಧ್ಯ ಎಂದು ಅಭಿಪ್ರಾಯಪಟ್ಟರು. 
ಚೇತನಾ ಶಿಕ್ಷಣ ಸಂಸ್ಥೆಯ ಸಂಸ್ಥಾಪಕರಾದ ಡಾ||ದಯಾನಂದ ಜುಗತಿ ಅಧ್ಯಕ್ಷತೆವಹಿಸಿದ್ದರು. ಮೊದಲಿಗೆ ಶ್ರೀ ಜಿ.ಎಸ್.ಕಾಂಬಳೆ ಕಾರ್ಯದರ್ಶಿಗಳು ಸ್ವಾಗತಿಸಿದರು, ಜ್ಞಾನ ವಿಜ್ಞಾನ ಸಮಿತಿ ಜಿಲ್ಲಾ ಘಟಕದ ಅಧ್ಯಕ್ಷರಾದ ಶ್ರೀಎಸ್.ವ್ಹಿ.ಬುರ್ಲಿ ಪ್ರಾಸ್ತಾವಿಕ ಮಾತನಾಡಿ ಸಮಿತಿಯ ಜವಾಬ್ದಾರಿಗಳನ್ನು ವಿವರಿಸಿದರು. ಕೊನೆಯಲ್ಲಿ ಉಪಾಧ್ಯಕ್ಷರಾದ ಶ್ರೀ ಜೆ.ಎಸ್.ಸೊಡ್ಡಗಿ ವಂದಿಸಿದರು.
ಈ ಕಾರ್ಯಕ್ರಮದಲ್ಲಿ ಜಿಲ್ಲಾ ಸಮಿತಿಯ ಸಹ ಕಾರ್ಯದರ್ಶಿ ಎಸ್.ಎನ್.ಅವಟಿ, ಖಜಾಂಚಿ ಶ್ರೀ ಎ.ಎಸ್.ಗುಂಡಳ್ಳಿ, ಸದಸ್ಯರಾದ ಶ್ರೀ ಜಿ.ವಿ.ಹಿರೇಮಠ, ಶ್ರೀಪಿ.ಎಸ್.ಹಿರೇಮಠ ಶ್ರೀ ಎಲ್.ಎಚ್.ಹಡಪದ, ಶ್ರೀಮತಿ ಶ್ರೀದೇವಿ ಪಾಟೀಲ, ಶ್ರೀಮತಿ ಕಲ್ಪನಾ ಪಾಟೀಲ, ಶ್ರೀ ಬಿ.ಕೆ.ಅನಾಜೆ, ಫೆಢಿನಾ ಸಂಸ್ಥೆಯ ಸಿಬ್ಬಂದಿ,ಎಸ್.ಎಮ್.ಹೊರಗಿನಮನಿ ಅಧ್ಯಕ್ಷರು ಡಿ.ಇ.ಆರ್.ಒ ವಿಜಾಪುರ, ಜಿಲ್ಲೆಯ ವಿಜ್ಞಾನ ಆಸಕ್ತರು, ಹಾಗೂ ಶಿಕ್ಷಕರು ಪಾಲ್ಗೊಂಡಿದ್ದರು.
                                                                               
                                                                                                          
            (ಜಿ.ಎಸ.ಕಾಂಬಳೆ ಕಾರ್ಯದರ್ಶಿ,   ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ವಿಜಾಪುರ)