Friday, June 1, 2012

ತುಮಕೂರು: ಶುಕ್ರ ಸಂಗ್ರಮ ಕಾರ್ಯಾಗಾರ




ಶುಕ್ರ ಸಂಗ್ರಮ ಕಾರ್ಯಾಗಾರ

ತುಮಕೂರು: ಶತಮಾನದ ದ್ವಿತೀಯ ಖಗೋಳ ವಿಸ್ಮಯ ಶುಕ್ರ ಸಂಕ್ರಮ ಕಾರ್ಯಾಗಾರ ಕುರಿತ ಒಂದು ದಿನದ ಕಾರ್ಯಾಗಾರವನ್ನು ಜೂ.೩ರಂದು ಬೆಳಗ್ಗೆ ೧೧ ಗಂಟೆಗೆ ತುಮಕೂರಿನ ಎಂಪ್ರೆಸ್ ಕಾಲೇಜಿನಲ್ಲಿ ಹಮ್ಮಿಕೊಂಡಿದೆ.

ವೈಜ್ಞಾನಿಕ ವಿಧಾನಗಳ ಬಗ್ಗೆ ಸಂಪನ್ಮೂಲ ವ್ಯಕ್ತಿಗಳು ಪ್ರಾಯೋಗಿಕವಾಗಿ ತಿಳಿಸಿಕೊಡಲಿದ್ದಾರೆ. ವಿದ್ಯಾರ್ಥಿಗಳು, ಸಾರ್ವಜನಿಕರು,  ಖಗೋಳಾಸಕ್ತರು ಈ ಕಾರ್ಯಾಗಾರದಲ್ಲಿ ಭಾಗವಹಿಸಿ, ಅಪರೂಪದ ಘಟನೆಗಳನ್ನು ವೀಕ್ಷಿಸಲು ಕೋರಲಾಗಿದೆ.

ಈ ಕಾರ್ಯಾಗಾರದಲ್ಲಿ ಶುಕ್ರ ಸಂಕ್ರಮ ಉಂಟಾಗುವ ಬಗ್ಗೆ, ಅದರ ಹಂತಗಳು ಮತ್ತು ವೀಕ್ಷಣೆಯನ್ನು ಮಾಡಲು ಸಹಕಾರಿಯಾಗುವ ಕಿಟ್‌ಗಳು ಮತ್ತು ಶುಕ್ರ ಸಂಕ್ರಮ ಪುಸ್ತಕ, ವಿಶೇಷ ಕನ್ನಡಕಗಳನ್ನು ಮಾರಾಟ ಮಾಡಲಾಗುವುದು. ಹೆಚ್ಚಿನ ಮಾಹಿತಿಗಾಗಿ ಎಚ್.ಎಂ. ವಸಂತಕುಮಾರ್, ೯೯೮೦೩೭೯೮೨೯, ಶಿವಕುಮಾರಸ್ವಾಮಿ, ೯೪೪೮೩೪೪೨೬೮ ಸಂಪರ್ಕಿಸುವಂತೆ ಕೋರಲಾಗಿದೆ.


Tuesday, May 1, 2012

ಭಾಸ್ಕರಾಚಾರ್ ಅವರಿಗೆ KJVS ಅಭಿನಂದನೆ

ತುಮಕೂರು ಜಿಲ್ಲಾ ಕ ಸಾ ಪ  ಅಧ್ಕ್ಷರಾಗಿ ಆಯ್ಕೆಯಾದ ಶ್ರೀ ಸೊ ಮು ಭಾಸ್ಕರಾಚಾರ್ ಅವರನ್ನು ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿಯ ರಾಜ್ಯ ಉಪಾಧ್ಯಕ್ಷರಾದ ಶ್ರೀ ಬಿ ಎ ಚಿದಂಬರಯ್ಯ  ರಾಜ್ಯ ಕಾರ್ಯದರ್ಶಿ ಈ. ಬಸವರಾಜು ಮತ್ತು ನಿತ್ಯಾನಂದ, ಜಗದೀಶ್, ಸ್ವಾಮಿ, ಧನಂಜಯ, ರಮೇಶ್, ಪರಮೇಶ್, ರೋಹಿತ್, ಅವರುಗಳು ಅಭಿನಂದಿಸಿದರು.