Tuesday, February 5, 2013

ರಾಜ್ಯ ಮಟ್ಟದ ಶೈಕ್ಷಣಿಕ ಸಮ್ಮಿಲನ


ಮಾನ್ಯರೇ

    ವಿಷಯ: ಶಿಕ್ಷಣ ಶಿಲ್ಪಿ ಪತ್ರಿಕೆಯ ಬಿಡುಗಡೆ ಹಾಗೂ ರಾಜ್ಯ ಮಟ್ಟದ ಶೈಕ್ಷಣಿಕ ಸಮ್ಮಿಲನ ಕಾರ್ಯಕ್ರಮಕ್ಕೆ ಆಗಮಿಸುವ ಬಗ್ಗೆ.
ತಮಗೆ ಈಗಾಗಲೇ ತಿಳಿದಿರುವಂತೆ ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿಯು “ಶಿಕ್ಷಣಶಿಲ್ಪಿ” ಎಂಬ ಶೈಕ್ಷಣಿಕ ಮಾಸಪತ್ರಿಕೆಯನ್ನು ಪ್ರಕಟಿಸುತ್ತಿದ್ದು ಪತ್ರಿಕೆಯ ಪ್ರಾರಂಭೋತ್ಸವ ಹಾಗೂ ರಾಜ್ಯಮಟ್ಟದ “ಶೈಕ್ಷಣಿಕ ಸಮ್ಮಿಲನ”À ಕಾರ್ಯಕ್ರಮವನ್ನು ದಿನಾಂಕ 16 ಮತ್ತು 17 ಫೆಬ್ರವರಿ 2013 ರಂದು ಕೆ.ಆರ್.ನಗರದಲ್ಲಿ ನಡೆಸಲಾಗುತ್ತಿದೆ. ಈ ಕಾರ್ಯಕ್ರಮಕ್ಕೆ ಸಂಬಂಧಿಸಿದ ವಿವರಗಳಿಗಾಗಿ ಕರಪತ್ರಗಳನ್ನು ಕಳಿಸುತ್ತಿದ್ದೇವೆ.

ತಾವು ಈ ಕರಪತ್ರಗಳನ್ನು ತಮ್ಮ ಗೆಳೆಯರು, ಕೆಜೆವಿಎಸ್ ಸದಸ್ಯರು, ಕರಾವಿಪ ಸದಸ್ಯರು, ಶಿಕ್ಷಣಾಸಕ್ತರು, ಎಸ್‍ಡಿಎಂಸಿ ಸದಸ್ಯರು, ಎನ್.ಜಿ.ಒ ಪ್ರತಿನಿಧಿಗಳಿಗೆ ನೀಡಿ ಅವರನ್ನು ಕಾರ್ಯಕ್ರಮಕ್ಕೆ ಪ್ರತಿನಿಧಿಗಳಾಗಿ ನೊಂದಾಯಿಸಲು ಕೋರಿದೆ. ಪ್ರತಿನಿಧಿಗಳು 200ರೂಗಳನ್ನು ನೀಡಿ ನೊಂದಾಯಿಸಿಕೊಳ್ಳಬೇಕು. ನೊಂದಾಯಿಸಲು ಈ ಪತ್ರದೊಂದಿಗೆ ರಶೀದಿ ಪುಸ್ತಕವನ್ನು ಕಳಿಸಲಾಗಿದೆ. ಅವರಿಗೆ ಒಂದು ಬ್ಯಾಗ್, ಪೆನ್, ಪ್ಯಾಡ್ ಜೊತೆಗೆ ಊಟ, ವಸತಿಯ ವ್ಯವಸ್ಥೆಯನ್ನು ಮಾಡಲಾಗುವುದು. ಪ್ರತಿನಿಧಿಗಳು ತಮ್ಮ ಪ್ರಯಾಣದ ವ್ಯವಸ್ಥೆಯನ್ನು ಮಾಡಿಕೊಂಡು ಬರಬೇಕಾಗುತ್ತದೆ. ಶಿಕ್ಷಕರಿಗೆ ಒ.ಒ.ಡಿ ಸೌಲಭ್ಯವಿದ್ದು  ಪ್ರತಿಯನ್ನು ಲಗತ್ತಿಸಿದೆ.

ಈಗಾಗಲೇ ರಾಜ್ಯದಾದ್ಯಂತ ಸುಮಾರು 300 ಪ್ರತಿನಿಧಿಗಳು ನೊಂದಾಯಿಸಿಕೊಂಡಿರುವ ವರದಿಯಿದೆ. ದಾವಣಗೆರೆ ಜಿಲ್ಲೆ  ಹರಪನಹಳ್ಳಿ ತಾಲೂಕಿನಿಂದ 50 ಪ್ರತಿನಿಧಿಗಳು ಒಂದು ಬಸ್ ಮಾಡಿಕೊಂಡು ಬರುತ್ತಿದ್ದಾರೆ. ಧಾರವಾಡ ತಾಲೂಕಿನವರು ಒಂದು ಜಿಪ್ ಮಾಡಿಕೊಂಡು ಬರುತ್ತಿದ್ದಾರೆ. ತಮ್ಮ ಜಿಲ್ಲೆ/ತಾಲೂಕಿನಿಂದ ಹೆಚ್ಚು ಪ್ರತಿನಿಧಿಗಳನ್ನು ನೊಂದಾಯಿಸಿ ಕರೆದುಕೊಂಡು ಬರಲು ಕೊರಿದೆ. ಸುಮಾರು 1000 ಪ್ರತಿನಿಧಿಗಳಿಗೆ ಮಾತ್ರ ಅವಕಾಶ ಮಾಡಲು ಸಾಧ್ಯವಿರುವ ಕಾರಣ ತಾವು ನೊಂದಾಯಿಸಿದ ಕೂಡಲೇ ರಾಜ್ಯ ಕೇಂದ್ರಕ್ಕೆ ತಿಳಿಸಲು ಕೋರಿದೆ. ಕಾರ್ಯಕ್ರಮದ ಆಹ್ವಾನ ಪತ್ರಿಕೆಯನ್ನು ಮುಂದಿನ ಶನಿವಾರ ನಿಮಗೆಲ್ಲ ಕಳಿಸಿಕೊಡಲಾಗುವುದು.

ಧಾರವಾಡ, ಬೆಳಗಾವಿ, ಗದಗ್, ಬಿಜಾಪುರ, ಬಾಗಲಕೋಟೆ, ಹಾವೇರಿ, ದಾವಣಗೆರೆ ಜಿಲ್ಲೆಗಳವರು ಧಾರವಾಡ-ಮೈಸೂರು ಎಕ್ಸ್ ಪ್ರೆಸ್ ರೈಲಿನಲ್ಲಿ ಬರಬಹುದು. ಶಿವಮೊಗ್ಬದವರು ಶಿವಮೊಗ್ಗ-ಮೈಸೂರು ರೈಲಿನಲ್ಲಿ, ಮಂಗಳೂರು, ಉಡುಪಿ ಕಡೆಯಿಂದ ಬರುವವರು ಕಣ್ಣೂರು-ಯಶವಂತಪುರ ರೈಲಿನಲ್ಲಿ, ಬೀದರ್, ಗುಲ್ಬರ್ಗ, ರಾಯಚೂರು, ಬಳ್ಳಾರಿ ಜಿಲ್ಲೆಯವರು ಬೆಂಗಳೂರಿಗೆ ರೈಲಿನಲ್ಲಿ ಬಂದು ಅಲ್ಲಿಂದ ಮೈಸೂರಿಗೆ ಬರಬಹುದು.

ಕೆ.ಆರ್.ನಗರದ ಮಾಹಿತಿಗಾಗಿ: ಶ್ರೀ ಕೆ.ಹೆಚ್.ಗಿರೀಶ್-9731136918, ಎಂ.ಎಸ್.ಲಕ್ಷ್ಮೀಕಾಂತ್-9448780357, ಆನಂದ್-8722393456, ಕೆ.ಬಿ.ವಿಶ್ವನಾಥ್-8880603038 ಇವರುಗಳನ್ನು ಸಂಪರ್ಕಿಸಲು ಕೋರಿದೆ.

ವಂದನೆಗಳೊಂದಿಗೆ
ತಮ್ಮ ವಿಶ್ವಾಸಿ
                                                                           ಈ.ಬಸವರಾಜು
ಕಾರ್ಯದರ್ಶಿ

Tuesday, January 29, 2013

Report from Davangere unit

'ವೈಜ್ಞಾನಿಕ ವಿಚಾರ ಧಾರೆ ಬಿತ್ತುವುದೇ ಧ್ಯೇಯ'

First Published: 28 Jan 2013 11:21:53 AM IST

ಹರಪನಹಳ್ಳಿ: ವೈಜ್ಞಾನಿಕ ವಿಚಾರ ಧಾರೆ ಮೂಲಕ ವಿಜ್ಞಾನವನ್ನು ಜನ ಸಾಮಾನ್ಯರಿಗೆ ಮುಟ್ಟಿಸುವುದೇ ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿಯ ಮೂಲ ಉದ್ದೇಶವಾಗಿದೆ ಎಂದು ಸಮಿತಿ ರಾಜ್ಯ ಘಟಕದ ಸಹ ಕಾರ್ಯದರ್ಶಿ ಎಚ್. ಚಂದ್ರಪ್ಪ ತಿಳಿಸಿದ್ದಾರೆ.

 ಅವರು ಪಟ್ಟಣದ ಸರ್ಕಾರಿ ಬಾಲಕಿಯರ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಭಾನುವಾರ ಆಯೋಜಿಸಿದ್ದ ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ತಾಲೂಕು ಘಟಕದ ಪದಾಧಿಕಾರಿಗಳ ಆಯ್ಕೆ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿ, ಅವೈಜ್ಞಾನಿಕ ವಿಚಾರಗಳನ್ನು ದೃಶ್ಯ ಮಾಧ್ಯಮಗಳು ದಿನನಿತ್ಯ ಬಿತ್ತರಿಸುತ್ತವೆ. ವಿಜ್ಞಾನವನ್ನು ಜ್ಞಾನದ ಮೂಲಕ ಜನಸಾಮಾನ್ಯರಿಗೆ ತಲುಪಿಸುವ ಉದ್ದೇಶ ಹೊಂದಲಾಗಿದೆ ಎಂದು ಅವರು ಹೇಳಿದರು.

ವಿಜ್ಞಾನ ಚಳವಳಿ: ಬಹಳಷ್ಟು ಜನ ಅಕ್ಷರಸ್ಥರೇ ಇಂದು ಅವೈಜ್ಞಾನಿಕತೆ ಮೂಡಿಸುವ ಕೆಲಸದಲ್ಲಿ ನಿರತರಾಗಿದ್ದಾರೆ. ಇಂತಹ ಸಂದರ್ಭದಲ್ಲಿ ವಿಜ್ಞಾನ ಚಳವಳಿ ಕಟ್ಟುವ ಕೆಲಸದಲ್ಲಿ ಕೈ ಜೋಡಿಸಬೇಕು ಎಂದು ಅವರು ಹೇಳಿದರು.

ಶಿಕ್ಷಣ ಮಹಾವಿದ್ಯಾಲಯದ ಪ್ರೊ. ತಿಮ್ಮಪ್ಪ ಅವರು ಜನರಲ್ಲಿ ಮೌಢ್ಯ ರಕ್ತಗತವಾಗಿ ತುಂಬಿವೆ. ಮೌಢ್ಯಗಳನ್ನು ಮೌಲ್ಯವೆಂದು ಭಾವಿಸಿದ್ದಾರೆ. ಅವುಗಳನ್ನು ಹೋಗಲಾಡಿಸಿ ವೈಜ್ಞಾನಿಕ ಚಿಂತನೆಗೆ ಹಚ್ಚಬೇಕು, ಜಾತಿ, ಧರ್ಮ ಮೀರಿ ಈ ಸಂಘಟನೆ ಕೆಲಸ ಮಾಡುತ್ತಿದೆ ಎಂದು ಅವರು ವಿಜ್ಞಾನ ಸಮಿತಿಯನ್ನು ಶ್ಲಾಘಿಸಿದರು.

 ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿಯ ತಾಲೂಕು ಘಟಕದ ನೂತನ ಅಧ್ಯಕ್ಷ ಇಸ್ಮಾಯಿಲ್ ಎಲಿಗಾರ ಮಾತನಾಡಿ, ಮನೋಬಲ ಹೆಚ್ಚಿಸಲು ಇಂತಹ ಸಂಘಟನೆ ಬಹಳ ಅವಶ್ಯಕವಾಗಿದ್ದು, ಈ ಸಂಘಟನೆಯಲ್ಲಿ ಹೆಚ್ಚಿನವರು  ಶಿಕ್ಷಕರಿದ್ದು, ಸಾಮಾಜಿಕ ಬದ್ಧತೆ ಇರಬೇಕು. ಅದಕ್ಕೆ ಅಧ್ಯಯನಶೀಲತೆ ಬಹಳ ಮುಖ್ಯ ಕೇವಲ ಕೆಜಿವಿಎಸ್ ಗೆ ಸದಸ್ಯರಾದರೆ ಸಾಲದು ಸಮಾಜಮುಖಿಯಾಗಿ ಕೆಲಸ ಮಾಡಬೇಕು ಎಂದು ಅವರು ಹೇಳಿದರು.

ಸಂಘಟನೆಯ ಜಿಲ್ಲಾ ಮುಖಂಡಅಲಿಖಾನ್, ಜಿಲ್ಲಾ ಸಮಿತಿ ಸದಸ್ಯ ಬಸವರಾಜ, ರಾಜ್ಯ ಸಮಿತಿ ಸದಸ್ಯ ಗಂಗಾಧರ, ಅಶೋಕ, ಅಂಜಿನಪ್ಪ, ಸದಾಶಿವ, ಹೂವಣ್ಣ ಇದ್ದರು.