Thursday, April 12, 2012

ಪವಾಡ ರಹಸ್ಯ ಬಯಲು ತರಬೇತಿಗೆ ಆಹ್ವಾನ





ಪ್ರಿಯ ಗೆಳೆಯರೇ,

ಸಮಾಜವನ್ನು ಒಂದಿಲ್ಲ ಒಂದು ರೀತಿಯಲ್ಲಿ ಕಾಡುತ್ತಿರುವ ಮೌಢ್ಯವು ಜನರ ಪ್ರಗತಿಗೆ ಮಾರಕವಾಗಿದೆ.ಜನರು ತಮಗೆ ಅರಿವಿಲ್ಲದಂತೆಯೇ ಮೌಢ್ಯಕ್ಕೆ ದಾಸರಾಗುತ್ತಿದ್ದಾರೆ. ಈ ಬಗ್ಗೆ ಸಾಕಷ್ಟು ಅರಿವು, ಕಾಯ್ರಕ್ರಮಗಳು ಹಾಗೂ ಪ್ರಚಾರ ದೊರೆಯುತ್ತಿದ್ದರೂ ಮೌಢ್ಯವನ್ನು ಬಿತ್ತುವವರ ಸಂಖ್ಯೆಯೂ ಹೆಚ್ಚುತ್ತಿರುವುದು ವಿಷಾದನೀಯ. ಪ್ರಮುಖವಾಗಿ ಜ್ಯೋತಿಷಿಗಳು ಇಲೆಕ್ಟ್ರಾನಿಕ್ ಮಾಧ್ಯಮವನ್ನು ಆವರಿಸಿಕೊಂಡು ಪ್ರತಿ ದಿನ ಜನರಿಗೆ ತಪ್ಪು ಸಂದೇಶವನ್ನು ಕೊಡುತ್ತಲೇ ಬರುತ್ತಿದ್ದಾರೆ.

ಪವಾಡ ರಹಸ್ಯ ಬಯಲು, ವಿಚಾರವಾದಿ ಸಮಾವೇಶ, ವಿಚಾರ ಸಂಕಿರಣಗಳು, ಜಾಥಾಗಳು ಹಾಗೂ ಪುಸ್ತಕ ಮಾರಾಟದ ಮೂಲಕ ವಿವಿಧ ಸಂಘಟನೆಗಳು ಹಾಗೂ ವ್ಯಕ್ತಿಗಳು  ವೈಜ್ಣಾನಿಕ ಚಿಂತನೆಗೆ ತಮ್ಮದೇ ಆದ ಕೊಡುಗೆ ನೀಡುತ್ತಿವೆ. ಇಂಥ ಪ್ರಯತ್ನಗಳು ಹೊಸ ಹೊಸ ಅನ್ವೇಷಣೆಗಳ ಮೂಲಕ ಜನರನ್ನು ತಲುಪುವ ಕೆಲಸ ನಿರಂತರವಾಗಿ ಆಗಬೇಕಾಗಿದೆ.

ಈ ಹಿನ್ನೆಲೆಯಲ್ಲಿ ವೈಜ್ಣಾನಿಕ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವ ಕಾರ್ಯಕರ್ತರಿಗಾಗಿ ಪವಾಡ ರಹಸ್ಯ ಬಯಲು ತರಬೇತಿಯನ್ನು  ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ,  ಕರ್ನಾಟಕ  ರಾಜ್ಯ  ವಿಜ್ಞಾನ ಪರಿಷತ್ ಮಂಡ್ಯ ಜಿಲ್ಲಾ ಸಮಿತಿ ಹಾಗೂ   ವಿಜ್ಞಾನ ಮತ್ತು ಅಭಿವೃದ್ಧಿ ಕೇಂದ್ರಗಳು ಜಂಟಿಯಾಗಿ ಸಂಘಟಿಸುತ್ತಿವೆ.

ಮೇ ತಿಂಗಳ 10, 11 ಮತ್ತು 12 ರಂದು ಮಂಡ್ಯದಲ್ಲಿ ನಡೆಯಲಿರುವ ಈ ತರಬೇತಿಯಲ್ಲಿ ಖ್ಯಾತ ವಿಚಾರವಾದಿಗಳೂ ರಾಷ್ಟ್ರದಾದ್ಯಂತ ಪವಾಡರಹಸ್ಯ ಬಯಲು ಮೂಲಕ ಜನರಲ್ಲಿ ಜಾಗೃತಿ ಮೂಡಿಸುವುದರಲ್ಲಿ ತೊಡಗಿಸಿಕೊಂಡಿರುವ ಪ್ರೊ.ನರೇಂದ್ರನಾಯಕ್, ವಿಚಾರವಾದಿಗಳ ಸಂಘಟನೆಯ ಪ್ರೊ.ಎ.ಎಸ್.ನಟರಾಜ್, ಖ್ಯಾತ ಸಾಹಿತಿ ಹಿ.ಶಿ.ರಾಮಚಂದ್ರೇಗೌಡ ಮುಂತಾದವರು ಪ್ರಾತ್ಯಕ್ಷಿಕೆ ಹಾಗೂ ಸಂವಾದವನ್ನು ನಡೆಸಿಕೊಡಲಿದ್ದಾರೆ. ಇದರೊಂದಿಗೆ ರಾತ್ರಿ ಆಕಾಶ ವೀಕ್ಷಣೆ ಮತ್ತು ಜೂನ್ 6 ರಂದು ಸಂಭವಿಸಲಿರುವ ಶುಕ್ರ ಸಂಕ್ರಮದ ಕುರಿತು ಉಪನ್ಯಾಸ ನಡೆಯಲಿದೆ.

ಈ ತರಬೇತಿಯಲ್ಲಿ ಭಾಗವಹಿಸಲು ಆಸಕ್ತಿ ಉಳ್ಳವರು ತಮ್ಮ ಪ್ರಯಾಣ ವೆಚ್ಚವನ್ನು ಭರಿಸಿಕೊಂಡು ಭಾಗವಹಿಸಬೇಕಾಗುತ್ತದೆ. ಶಿಬಿರಾರ್ಥಿಗಳಿಗೆ ಆಹಾರ ಹಾಗೂ ಸರಳ ವಸತಿ ವ್ಯವಸ್ಥೆಯನ್ನು ಮಾಡಲಾಗುವುದು. ಆಸಕ್ತರು ದಿನಾಂಕ 30.04.2012ರೊಳಗೆ ಸಿ.ಕೃಷ್ಣೇಗೌಡ, ಉಪನ್ಯಾಸಕರು, ನಂಜುಶ್ರೀ ನಿಲಯ, ಮನೆ ನಂ.365/7-ಎನ್-21, ದುರ್ಗಾದೇವಿ ಟೆಂಪಲ್ ರಸ್ತೆ, ನಜರಾಬಾದ್, ಮೈಸೂರು-10  ವೊ:8453503018 ಇವರನ್ನು ಸಂಪರ್ಕಿಸಿ ನೊಂದಾಯಿಸಿಕೊಳ್ಳುವುದು. 

         

ಚಿತ್ರ ಕೃಪೆ: ಕಣಜ ಅಂತರಜಾಲ ಕನ್ನಡ ಜ್ಞಾನಕೋಶ

No comments:

Post a Comment