Saturday, December 29, 2012

ರಾಷ್ಟ್ರಕವಿ ಕುವೆಂಪು 108ನೇ ಜನ್ಮದಿನಾಚರಣೆ

ಕರ್ನಾಟಕ ಸಾಂಸ್ಕøತಿಕ ಸಂಸ್ಥೆ, ಹೂವಿನ ಹಡಗಲಿ-ಹೊಸಪೇಟೆ
ಪ್ರಿಯದರ್ಶಿನಿ ಮಹಿಳಾ ಸಂಘ, ಹೊಸಪೇಟೆ 



ಅಧ್ಯಕ್ಷತೆ: ಡಾ. ಸುಲೋಚನ, ಅಧ್ಯಕ್ಷರು, ಪ್ರಿ. ಮ. ಸಂಘ, ಹೊಸಪೇಟೆ

ಮುಖ್ಯ ಅತಿಥಿಗಳು: ಶ್ರೀ ಎಂ.ಪಿ. ರವೀಂದ್ರ , ಅಧ್ಯಕ್ಷರು, ಬಿಡಿಸಿಸಿ ಬ್ಯಾಂಕ್, ಹೊಸಪೇಟೆ
ಶ್ರೀ ಕೆ.ಭೀಮಸೇನರಾವ್, ಮು.ಗು., ಡಾ.ಗೋ.ಸ್ಮಾ.ಪ್ರೌಢಶಾಲೆ, ಹೊಸಪೇಟೆ

ಉಪನ್ಯಾಸ : ಪ್ರೊ. ಅಬ್ದುಲ್ ಸಮದ್ ಕೊಟ್ಟೂರು 
ವಿಷಯ: ವಿಶ್ವಮಾನವ ಸಂದೇಶ 

ನಾಟಕ : ಸಂಜೆ ದೀಪ 
ರಚನೆ,ನಿರ್ದೇಶನ,ವಿನ್ಯಾಸ : ಶ್ರೀ ಮುದೇನೂರು ಉಮಾಮಹೇಶ್ವರ 
ಪ್ರಸ್ತುತಿ: ರಂಗ-ಪ್ರಕಾಶ 
ಪಾತ್ರ ವರ್ಗ: ಎಲ್. ಕೊಟ್ರೇಶ್, ಎಂ.ದುರ್ಗ, ಎಂ.ಶಬನ,   
                        ಎಂ.ಮಂಜುನಾಥ, ಎಲ್.ಉದಯಕುಮಾರ, ಕೆ.ಹೆಚ್.ಚಿತ್ತರಂಜನ್.
ತೆರೆ ಹಿಂದೆ: ಬಿ. ಆನಂದ್, ಟಿ.ಎಂ.ನಾಗಭೂಷಣ, ಬಿ.ಶಿವಕುಮಾರ 
 
ರಂಗ ಸಹಕಾರ: ನಾಟ್ಯ ಕಲಾ ರಂಗ, ಮರಿಯಮ್ಮನಹಳ್ಳಿ
======================================================
ದಿನಾಂಕ: 29.12.2012, ಸಂಜೆ: 6.00 ಗಂಟೆಗೆ
ಸ್ಥಳ: ಡಾ.ಗೋಪಿನಾಥರಾವ್ ಸ್ಮಾರಕ ಪ್ರೌಢಶಾಲೆ, ಹೊಸಪೇಟೆ
====================================================
ನೆರವು 

ಬಿಡಿಸಿಸಿ ಬ್ಯಾಂಕ್, ಪ್ರಧಾನ ಕಛೇರಿ, ಹೊಸಪೇಟೆ 
ಹಾಗೂ 
ರಂಗ ಭಾರತಿ, ಹೂವಿನಹಡಗಲಿ


ನಮ್ಮೊಂದಿಗೆ

ಡಾ. ಮೃತ್ಯುಂಜಯ ರುಮಾಲೆ | ಎಂ.ಎಂ.ಶಿವಪ್ರಕಾಶ
ಉತ್ತಂಗಿ ಕೊಟ್ರೇಶ್ | ಡಾ.ಕೆ. ವೆಂಕಟೇಶ ಅಧ್ಯಕ್ಷರು, ಕಸಾಪ. ತಾ.ಘಟಕ
ಗುಜ್ಜಲ್ ರಘು | ಹೆಚ್.ಎಂ.ನಿರಂಜನ, ಟಿ.ಎಂ.ಉಷಾರಾಣಿ
ಸುಜಾತ ರೇವಣಸಿದ್ದಪ್ಪ | ಪ್ರೊ. ಯು.ರಾಘವೇಂದ್ರರಾವ್
ವಿಜಯಕುಮಾರ ಎನ್.ಎಂ.|  ಸೊ.ದಾ.ವಿರುಪಾಕ್ಷಗೌಡ
ಉದಯ್ ಮಮಹಳ್ಳಿ | ಶ್ರೀನಾಥ ಬಿ.ಎಂ.
ಎಸ್.ಎಂ.ಶಶಿಧರ | ವಿನೀತ್ ಕುಮಾರ.ಬಿ.ಎಂ.
ಸೈಯದ್ ಹುಸೇನ್, ಕಂಪ್ಲಿ | ಪ್ರಮೋದ್ ಕುಮಾರ, ಎಂ.ಬಿ.ಎ.
ರವಿಕುಮಾರ ಎಂ.ಬಿ.ಎ. | ಪ್ರಕಾಶ್, ಪತ್ರಕರ್ತರು, ಮಮಹಳ್ಳ್ಳಿ
ಪ್ರಭು ಕೆಂದೂಳೆ   |   ಚೆನ್ನಬಸಯ್ಯ ಕೆ.ಎಂ.
ನೂರ್ ಜಹಾನ್ | ನಾಗರಾಜ ಹಳ್ಳಿಕಟ್ಟಿ, ಹಡಗಲಿ
ಕೆ.ನಾಗರತ್ನಮ್ಮ, ಮಮಹಳ್ಳ್ಳಿ |  ಜಿ.ಎಂ.ಪ್ರಭು, ಹೊಸಪೇಟೆ ಸ್ಟೀಲ್ಸ್
ಪಂಪಾಮಹೇಶ್ | ಕೊಟ್ರೇಶ್ ಕೆ. ಜೆ.ಎಸ್.ಡಬ್ಲೂ
ಪರಶುರಾಮ ಕಲಾಲ್ | ಗಿರೀಶ್ ನಾಗರಬೆಂಚಿ
ಬಿ.ಎಂ.ಎಸ್.ಪ್ರಭು, ಮಮಹಳ್ಳ್ಳಿ | ಹೊಸ್ಮನಿ ಬಸವರಾಜ ಕಲ್ಮಂಗಿ
ಕು. ಅಂಜಲಿ | ಎನ್.ಕೆ.ಚಂದ್ರಶೇಖರ
ಸಿ.ವಿಜಯಕುಮಾರ| ಆನಂದ್, ಮಮಹಳ್ಳ್ಳಿ 
ಡಾ. ಮಲ್ಲಯ್ಯ ಶಿಕ್ಷಕರು | ಡಾ, ಸಾವಿತ್ರಿ ರಾಜಶೇಖರ ಶಿಕ್ಷಕರು
ಪ್ರಕಾಶ್, ವಕೀಲರು, ಕಂಪ್ಲಿ | ಎಸ್.ಎಸ್.ಚಂದ್ರಶೇಖರ ಎಂಎಸ್‍ಪಿಎಲ್ ಲಿ
ಕೆ.ಚಂದ್ರಪ್ಪ,ಅಧ್ಯಕ್ಷರು, ಸಮುದಾಯ,ತಾ.ಘ.| ಬಂಗಿ ಮಂಜುನಾಥ  ಕಂಪ್ಲಿ ಬಾಬುರಾವ್ ರುಕ್ಮಣ ಶ್ರೀಖಂಡೆ  ಕಂಪ್ಲಿ.  ಅಂಬಿಗರ ಮಂಜುನಾಥ ಕಂಪ್ಲಿ  
ಅನೀಫ್ ಕಂಪ್ಲಿ | ಮಲ್ಲಿಕಾರ್ಜುನ ಬಿ. ಶಿಕ್ಷಕರು  
ಕೆ.ಬಿ.ವಿಜಯಕುಮಾರ ಅಶ್ವಿನಿ ಶಾಲೆ | ಎಸ್.ಎಸ್. ಪಾಟೀಲ್ ಶಿಕ್ಷಕರು
ಗುರುಮೂರ್ತಿ ರೈತ ಮುಖಂಡರು  |  ವಿಶ್ವನಾಥ ಕವಿತಾಳ
ಎಚ್.ಪಿ. ಕಲ್ಲಂಭಟ್ ಸಂಗೀತ ಭಾರತಿ| ಟಿ.ಎಚ್.ಎಂ.ಚಂದ್ರಶೇಖರ ಅಧ್ಯಕ್ಷರು, ಚುಸಾಪ, 
ಕೆ.ಎಂ. ಅನ್ನಪೂರ್ಣ| ಜಿ. ಅನ್ನಪೂರ್ಣ
ಎಸ್. ಎಂ. ಶಿವಲೀಲಾ | ಎಸ್. ಎಂ.. ನಾಗರತ್ನ , ಎಸ್. ಎಂ. ಸೌಮ್ಯ
ಸೃಷ್ಠಿ ಕಲಾ ಬಳಗ, ಮರಿಯಮ್ಮನಹಳ್ಳಿ | ಲಲಿತ ಕಲಾ ರಂಗ, ಮರಿಯಮ್ಮನಹಳ್ಳಿ
ಕನ್ನಡ ಸಾಹಿತ್ಯ ಪರಿಷತ್, ಹೊಸಪೇಟೆ
ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ, ಹೊಸಪೇಟೆ

ಪ್ರಗತಿಪರ / ಕನ್ನಡಪರ ಸಂಘಟನೆಗಳ ಎಲ್ಲಾ ಪದಾಧಿಕಾರಿಗಳಿಗೆ ಆತ್ಮೀಯ ಆಹ್ವಾನ

ನಾಗಭೂಷಣ ಟಿ.ಎಂ    ಡಾ.ಸುಲೋಚನ  ಜಂಬುನಾಥ ಹೆಚ್.ಎಂ.
ಅಧ್ಯಕ್ಷರು, ಕ.ಸಾ.ಸಂ.      ಅಧ್ಯಕ್ಷರು, ಪ್ರಿ.ಮ.ಸಂಘ    ಅಧ್ಯಕ್ಷರು ಚೇ.ಸಾ.ಸಂ.
   9886185146            9945188052     9008814457

Thursday, December 27, 2012

Secretary at Harapanahalli Function

KJVS Secretary E.Basavaraju was the Chief Guest in Gruha Pravesha Program of KJVS Activist Basavaraj at Harapanahalli recently. Dr.Veerabhadra Channamalla Swamiji of Nidumamidi Math was also another Guest in the function. Siddhana Gouda Patil, renowned Rationalist speaking on the occasion in the photograph. 

KJVS Meeting at Harapanahalli

KJVS at Extended EC Meeting washeld at Harapanahalli, Davangere district on 23 December 2012. Some photographs of the meeting.

  



KJVS News Dec 2012

KJVS News-ಸಂಪಾದಕೀಯ








ದೈನಂದಿನ ಆಗುಹೋಗುಗಳ ಬಗ್ಗೆ ಸಾರ್ವತ್ರಿಕವಾಗಿ ವಿಚಾರ ವಿನಿಮಯ ಪ್ರಜಾತ್ತಾತ್ಮಕ ವ್ಯವಸ್ಥೆಯಲ್ಲಿ ಸಹಜವೇ. ನಮ್ಮ ಬದುಕಿನ ಉದ್ದಗಲಕ್ಕೂ ಕಂಪ್ಯೂಟರ್ ಮತ್ತು ಅಂತರ್ಜಾಲವು ಹೆಣೆದುಕೊಂಡಿದೆ. ಫೇಸ್‍ಬುಕ್‍ನಲ್ಲಿ ಅಭಿಪ್ರಾಯ ಮಂಡನೆ ಮಾಡುವುದು, ಸಾರ್ವಜನಿಕವಾಗಿ ಚರ್ಚಿಸುವುದು ಸರ್ವೇಸಾಮಾನ್ಯ. ಇತ್ತೀಚೆಗೆ ಮುಂಬೈನಲ್ಲಿ ಇಬ್ಬರು ಹೆಣ್ಣುಮಕ್ಕಳು ತಮ್ಮ ಅಭಿಪ್ರಾಯವನ್ನು ಫೇಸ್‍ಬುಕ್‍ನಲ್ಲಿ ಚರ್ಚಿಸಿದ ವಿಷಯವು ಈಗ ಐಟಿ ಕಾಯ್ದೆಯನ್ನೇ ಬದಲಿಸುವ ಚರ್ಚೆಗೆ ಪೀಠಿಕೆ ಆಗಿದೆ.
ಎರಡು ಗುಂಪುಗಳ ನಡುವೆ ಗಲಭೆಗೆ ಪ್ರಚೋದನೆ ನೀಡಿದರು ಎಂಬ ಕಾರಣ ನೀಡಿ ಹಲವು ಕಲಂನಡಿಯಲ್ಲಿ ಈ ಇಬ್ಬರು ಹೆಣ್ಣುಮಕ್ಕಳ ಮೇಲೆ ಕೇಸು ಜಡಿಯಲಾಗಿದೆ. ತತ್ಪರಿಣಾಮವಾಗಿ ಭುಗಿಲೆದ್ದ ಚರ್ಚೆ, ಸರ್ವೋಚ್ಛ ನ್ಯಾಯಾಲದಲ್ಲಿ ಸಾರ್ವಜನಿಕ ಹಿತಾಸಕ್ತಿಯ ಅರ್ಜಿಯಾಗಿ ಪರಿಣಮಿಸಿ, ಮಾಹಿತಿ ತಂತ್ರಜ್ಞಾನ ಅಧಿನಿಯಮದ ಸೆಕ್ಷನ್ 66 ಮತ್ತು 67ಗಳು ಸಂವಿಧಾನದಲ್ಲಿ ನೀಡಲಾಗಿರುವ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಕುತ್ತಾಗಿರುವುದರಿಂದ, ಈ ಸೆಕ್ಷನ್‍ಗಳು ತಿದ್ದುಪಡಿ ಆಗಬೇಕೆಂಬ ಅಭಿಪ್ರಾಯ ರೂಪುಗೊಳ್ಳುತ್ತಿದೆ. ಅಂದರೆ ತಂತ್ರಜ್ಞಾನದ ಬಳಕೆ, ಸಾರ್ವಜನಿಕರ ಹಕ್ಕುಗಳು ಹಾಗೂ ಕಾನೂನುಗಳು ಮಾರ್ಪಾಡಾಗುವುದಕ್ಕೆ ಸಂಬಂಧವಿದೆ ಎಂಬುದೇ ಇಲ್ಲಿರುವ ಪಾಠ.

ನಮ್ಮ ದೇಶದ ಸಂವಿಧಾನದ ಪರಿಚ್ಛೇಧ 51ಎ(ಎಚ್) ಪ್ರಕಾರ, ಪ್ರತಿಯೊಬ್ಬ ಪ್ರಜೆಯೂ ವೈಜ್ಞಾನಿಕ ಮನೋಭಾವ ಮತ್ತು ಮಾನವೀಯ ಮೌಲ್ಯಗಳನ್ನು ಬೆಳೆಸಿಕೊಳ್ಳಬೇಕೆಂದಿದೆ. ಜನತೆಯಲ್ಲಿ ಮಾಹಿತಿ ಸಂವವಹನ, ಮನರಂಜನೆ ಮತ್ತು ಶಿಕ್ಷಣದ ಉದ್ದೇಶವಿರಬೇಕಿರುವ ಮಾಧ್ಯಮಗಳು, ಕೇವಲ ಮಾಹಿತಿ ಮತ್ತು ಮನರಂಜನೆ ಮಾರಾಟದಲ್ಲಿ ತೊಡಗಿವೆ. ಆದರೆ ಮಾಧ್ಯಮಗಳು ವೈಜ್ಞಾನಿಕ ಮನೋಭಾವವನ್ನು ಜನತೆಯಲ್ಲಿ ರೂಪಿಸುವ ಮಾತಿರಲಿ, ವಾಸ್ತು, ಹೋಮ, ಶಾಂತಿ, ಪ್ರಳಯ ಇತ್ಯಾದಿ ಬಗೆ ಬಗೆಯ ಮೌಢ್ಯವನ್ನು ಬಿತ್ತುವಲ್ಲಿ ಮುಳುಗಿಹೋಗಿವೆ. ಟಿವಿ ವಾಹಿನಿಗಳಂತೂ ನಮ್ಮ ಬದುಕಿನ ಅವಿಭಾಜ್ಯ ಅಂಗಗಳಾಗಿ ಹೋಗಿದೆ. ಮಾಧ್ಯಮದಲ್ಲಿ ಎಲ್ಲರೂ ಈ ದಂಧೆಯಲ್ಲಿ ತೊಡಗಿಲ್ಲವೆಂಬುದು ಆಶಾದಾಯಕ ವಿಚಾರವೇನೋ ಸರಿ.
ಕೆಲವಾದರೂ ಇಂಗ್ಲಿಷ್ ವಾಹಿನಿಗಳು ಪರಿಸರ ಪ್ರಜ್ಞೆ, ವೈಜ್ಞಾನಿಕ ಮನೋಭಾವ, ವೈಚಾರಿಕತೆಯ ಕಾರ್ಯಕ್ರಮಗಳನ್ನು ಬಿತ್ತರಿಸುತ್ತವೆ. ಆದರೆ ಈ ಕಾರ್ಯಕ್ರಮಗಳನ್ನು ಡಬ್ಬಿಂಗ್ ಮಾಡಬಾರದೆಂದು ಕನ್ನಡದ ಗುತ್ತಿಗೆ ಪಡೆದಿರುವ ಉದ್ಯಮಪತಿಗಳು ಧಮಕಿ ಹಾಕಿದ್ದಾರೆ.

ಆದರೆ, ಈ ವಿಷಯವೂ ಸ್ಪರ್ಧಾ ಆಯೋಗ (ಕಾಂಪಿಟೇಷ ನ್ ಕಮಿಷನ್ ಅಫ್ ಇಂಡಿಯಾ)ದಿಂದ ಚಲನಚಿತ್ರ ಮತ್ತು ವಾಣಿಜ್ಯ ಮಂಡಲಿಗೆ ನೋಟೀಸ್ ಬರಲು ಕಾರಣವಾಗಿದೆ. ಅತ್ತೆ-ಸೊಸೆ ಜಗಳ ಮತ್ತು ಹೆಂಗಸರನ್ನು ನಿರಂತರವಾಗಿ ಅಳಿಸುವ ಧಾರಾವಾಹಿಗಳು ಡಬ್ಬಿಂಗ್ ಮಾಡುವ ಅಗತ್ಯವಿಲ್ಲ, ಯಾಕೆಂದರೆ ಅನ್ಯಭಾಷಿಕರಿಗಿಂತ ನಮ್ಮ ನಿರ್ಮಾಪಕರೇ ಚೆನ್ನಾಗಿ ಅಳಿಸುತ್ತಾರೆಂಬುದನ್ನು ಒಪ್ಪೋಣ. ಆದರೆ, ದಟ್ಟ ಅಡವಿಗಳಲ್ಲಿ ಹೋಗಿ ವರ್ಷಗಟ್ಟಲೆ ಶ್ರಮಿಸಿ ಚಿತ್ರಿಸಿದ ವನ್ಯಜೀವಿ ಚಿತ್ರಗಳನ್ನು, ಕೈಗಾರಿಕೆಗಳಲ್ಲಿ ನಡೆಯುವ ಉತ್ಪಾದನೆಯ ಸಾಕ್ಷ್ಯಚಿತ್ರಗಳಿಗೆ ಧ್ವನಿಯನ್ನು ಡಬ್ ಮಾಡಿದರೆ, ಕನ್ನಡಿಗರಿಗೆ ಉತ್ಕೃಷ್ಟ ಕಲಾ-ವೈಜ್ಞಾನಿಕ ಚಿತ್ರಗಳಿಗೆ ತಮ್ಮ ಭಾಷೆಯಲ್ಲೇ ತಿಳಿಯುವ ಅವಕಾಶವಾಗುತ್ತದೆ.

ತಮಿಳುನಾಡಿನ ಜನರಿಗೆ ಈ ಭಾಗ್ಯವಿದೆ. ಅಲ್ಲಿ ಬಿಬಿಸಿ, ನ್ಯಾಷನಲ್ ಜಿಯೋಗ್ರಾಫಿಕ್ ವಾಹಿನಿಗಳ ಕಾರ್ಯಕ್ರಮಗಳು ತಮಿಳು ಧ್ವನಿಯಲ್ಲಿ ಮೂಡಿಬರುತ್ತಿವೆ. ಕನ್ನಡದ ನಿರ್ಮಾಪಕರು ಆ ಗುಣಮಟ್ಟದ ಕಾರ್ಯಕ್ರಮಗಳನ್ನು ಮಾಡಲಾರರು, ಡಬ್ಬಿಂಗ್ ಮಾಡಲು ಬಿಡಲಾರರು.

ವೈಜ್ಞಾನಿಕ ಮನೋಭಾವವನ್ನು ರೂಪಿಸುವ ಸೆಲೆಗಳನ್ನೇ ಚಿವುಟಿ ಹಾಕಿದರೆ, ವಾಸ್ತು, ಪ್ರಳಯ ಇತ್ಯಾದಿ ಗೊಬ್ಬರಗಳನ್ನು ನಮ್ಮ ಜನರಿಗೆ ತಿನ್ನಿಸುವುದನ್ನು ಅವ್ಯಾಹತವಾಗಿ ಮುಂದುವರಿಸಬಹುದಲ್ಲವೆ? ಮಾಧ್ಯಮದ ಮಿತ್ರರಿಗೆ ಬಾಯಿ ದೊಡ್ಡದು, ಕಿವಿ ತುಂಬ ಚಿಕ್ಕದು ಎಂಬ ಆರೋಪವಂತೂ ಇದೆ. ಯಾರಾದರೂ ಕೇಳಿಸಿಕೊಳ್ಳುತ್ತಿದ್ದಾರೆಯೇ?

ಹೆಬ್ಬಳ್ಳಿಯಲ್ಲಿ ಪವಾಡ ರಹಸ್ಯ ಬಯಲು

ಪ್ರಳಯ ಎಂಬುದು ಹಳಸಲು ಸುದ್ದಿ : ಶಂಕರ ಹಲಗತ್ತಿ

ಹೆಬ್ಬಳ್ಳಿ: ಡಿಸೆಂಬರ 14: ಪ್ರಳಯ ಎಂಬುದು ಹಳಸಲು ಸುದ್ದಿಯಾಗಿದ್ದು ಜನರು ಭಯಪಡುವ ಅಗತ್ಯವಿಲ್ಲ ಎಂದು ಕರ್ನಾಟಕ ವಿದ್ಯಾವರ್ಧಕ ಸಂಘದ ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ ತಿಳಿಸಿದರು.

ಅವರು ಸೋಮಾಪೂರದ ಪ್ರೌಢಶಾಲೆಯ ಮೈದಾನದಲ್ಲಿ ಹಮ್ಮಿಕೊಂಡಿದ್ದ ಪವಾಡ ರಹಸ್ಯ ಬಯಲು ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡ ಈ ಭೂಮಿಗೆ ವೈಜ್ಞಾನಿಕ ದಾಖಲೆಯ ಪ್ರಕಾರ 1000 ಕೋಟಿ ( 10 ಬಿಲಿಯನ್) ವರ್ಷಗಳು. ಈಗಾಗಲೇ 500 ಕೋಟಿ ವರ್ಷ ಪೂರೈಸಿದ್ದ ಇನ್ನೂ 500 ಕೋಟಿ ವರ್ಷಗಳು ಆಯಸ್ಸು ಭೂಮಿಗಿದೆ. ಒಬ್ಬ ಮನುಷ್ಯನ ಆಯಸ್ಸು 100 ವರ್ಷಗಳು ಮಾತ್ರ. ಪ್ರಳಯ ಗಿಳಯ ಏನೂ ಇಲ್ಲ. ಮಾನವನ ಸ್ವಾರ್ಥ ಸಾಧನೆಗಾಗಿ ಇಂದು ಪರಿಸರ ನಾಶದಂತಹ ಕಾರ್ಯಕ್ರಮಗಳಿಂದ ಮಳೆ ಕಡಿಮೆಯಾಗಿ, ಪರಿಸರದ ಏರು ಪೇರು ಆಗಲಿದ್ದು, ಪ್ರತಿಯೊಬ್ಬರೂ ಗಿಡಮರ ಬೆಳೆಸಿ ಪರಿಸರ ಸಂರಕ್ಷಿಸಿ ಉತ್ತಮ ಸಮಾಜ ನಿರ್ಮಿಸುವಲ್ಲಿ ಗಮನ ಹರಿಸುವ ಅಗತ್ಯತೆ ಇದೆ ಎಂದರು.

ಕಾರ್ಯಕ್ರಮವನ್ನು ಉದ್ಘಾಟಿಸಿದ ತಾ.ಂ. ಸದಸ್ಯ ಯೋಗೇಶಗೌಡ ಗೌಡರ ಈ ದೇಶದ ಪ್ರತಿಯೊಬ್ಬರೂ ವೈಜ್ಞಾನಿಕ ಮನೋಭಾವವನ್ನು ಬೆಳೆಸಿಕೊಂಡು, ಪವಾಡ ಎನ್ನುವ ಸಂಗತಿಗಳಲ್ಲಿ ಏಕೆ ಏನು ಹೇಗೆ ಎಂಬ ಪ್ರಶ್ನೆಗಳ್ನನು ಹಾಕುವುದರ ಮೂಲಕ ವೈಜ್ಞಾನಿಕ ಸತ್ಯವನ್ನು ಅರಿಯಬೇಕೆಂದು ಕರೆಯಿತ್ತರು.

ಗ್ರಾಪ ಸದಸ್ಯ ಬಸವರಾಜ ಬಿ ಮಾಯಕರ ಅಧ್ಯಕ್ಷತೆಯಲ್ಲಿ ಜರುಗಿದ ಈ ಕಾರ್ಯಕ್ರಮದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಬಿ.ಬಿಂಗೇರಿ , ಗುರು ತಿಗಡಿ, ಪ್ರಾರೆ ಸಮನ್ವಾಧಿಕಾರಿ ಎಸ್.ಎಚ್. ಬೆಳವಟಗಿ, ಆರ್.ಎಸ್.ಗುರುಮಠ, ಜಿ.ಬಿ.ಸಜ್ಜನ, ವೀರಣ್ಣ ಒಡ್ಡಿನ, ಚಂದ್ರು ತಿಗಡಿ, ಮಡಿವಾಳಪ್ಪ ಅಣ್ಣಿಗೇರಿ, ರತ್ನವ್ವ ಸಿರಗುಪ್ಪಿ, ಗಂಗವ್ವ ಮಾಯಕರ, ಶೇಖರಗೌಡ ಪಾಟೀಲ, ಕರೆಪ್ಪ ಮುತ್ತಗಿ ಮುಂತಾದವರು ಉಪಸ್ಥಿತರಿದ್ದರು.

ಆರಂಭದಲ್ಲಿ ಲಕ್ಕಮ್ಮನವರ ಸ್ವಾಗತಿಸಿದರು. ಸಿದ್ದಪ್ಪ ಮುತ್ತಗಿ ನಿರೂಪಿಸಿದರು. ಪಾಟೀಲ ವಂದಿಸಿದರು. ನಂತರ ಬಳ್ಳಾರಿಯ ಪವಾಡ ಅಧ್ಯಯನ ಸಂಸ್ಥೆಯ ವಸಂತಕುಮಾರ ತಂಡದವರು ಕೆಲವು ಮಾಟದ ಪ್ರಾತ್ಯಕ್ಷಿಕೆಗಳನ್ನು ಮಾಡಿತೋರಿಸಿ ಪವಾಡದ ಹಿಂದಿರುವ ವೈಜ್ಞಾನಿಕ ಕಾರಣಗಳನ್ನು ಮನದಟ್ಟು ಮಾಡಿದರು.

ಹೆಬ್ಬಳ್ಳಿಯಲ್ಲಿ ಪವಾಡ ರಹಸ್ಯ ಬಯಲು ಕಾರ್ಯಕ್ರಮ ಯಶಸ್ವಿ

ಹೆಬ್ಬಳ್ಳಿ: ಧಾರವಾಡ ತಾಲೂಕಿನ ಹೆಬ್ಬಳ್ಳಿ ಗ್ರಾಮದ ಶ್ರೀ ಸದ್ಗುರು ವಾಸುದೇವ ಪ್ರಾಥಮಿಕ ಶಾಲೆಯಲ್ಲಿ ಬಳ್ಳಾರಿಯ ಪವಾಡ ಅಧ್ಯಯನ ಸಂಸ್ಥೆಯ ವಸಂತಕುಮಾರ ತಂಡದವರಿಂದ ಪವಾಡ ರಹಸ್ಯ ಬಯಲು ಕಾರ್ಯಕ್ರಮವನ್ನು ಆಯೋಜಿಸಿ ಯಶಸ್ವಿಗೊಳಿಸಲಾಯಿತು.

ತಾಲೂಕ ಪಂಚಾಯತ ಅಧ್ಯಕ್ಷೆ ಸುಮಂಗಲಾ ಕೌದೆಣ್ಣವರ ಈ ಕಾರ್ಯಕ್ರಮವನ್ನು ಉದ್ಘಾಟಿಸಿ ನಮ್ಮ ಸಂವಿಧಾನದ ಆಶಯ ಮತ್ತು ಮೂಲಭೂತ ಹಕ್ಕುಗಳಲ್ಲಿ ಪ್ರಧಾನವಾದ ಅಂಶ ಈ ದೇಶದ ಪ್ರತಿಯೊಬ್ಬರಿಗೂ ವೈಜ್ಞಾನಿಕ ಮನೋಭಾವವನ್ನು ಬೆಳೆಸಿಕೊಳ್ಳಬೇಕು ಎಂಬುದಾಗಿದೆ.  ಸೌರವ್ಯೂಹ ಭೂಮಿ ಸೂರ್ಯ, ಆಕಶ ವಿಶ್ವದ ಅಗಾಧ ವಿಸ್ಮಯಗಳು ಇವುಗಳಲ್ಲಿ ವ್ಯತ್ಯಾಸ ಮತ್ತು ಬದಲಾವಣೆಗಳು ನಿರಂತರವಾಗಿ ಆಗುತ್ತವೆ. ಯಾವುದೇ ಪವಾಡ ಎಂದು ಜನತೆ ನಂಬಬಾರದು. ಪವಾಡದ ಹಿಂದೆ ಇರುವ ಸತ್ಯ ಅರಿಯಬೇಕು.  ಪವಾಡದ ಹಿಂದೆ ವೈಜ್ಞಾನಿಕ ಕಾರಣ ಇರುವುದನ್ನು ಕಂಡುಕೊಳ್ಳಲೇಬೇಕೆಂದರು.

ಧಾರವಾಡ ತಾಲೂಕ ಕೆ.ಜೆ.ವಿ.ಎಸ್. ಅಧ್ಯಕ್ಷ ಜಿ.ಟಿ.ಶಿರೋಳ ಬಹುಸಂಖ್ಯಾತ ಜನರ ಭಾವನೆಗಳ ಜೊತೆ ಸಮಸ್ಯೆಗಳ ಜೊತೆ ಬದುಕಿನ ಜೊತೆ ಮುಗ್ಧತೆಯ ಮತ್ತು ಅಜ್ಞಾನದ ಜೊತೆ ಮನುಕುಲ, ಪವಾಡ ಎಂಬ ವಿಷಯದ ಕುರಿತು ಆಟವಾಡುತ್ತಿದ್ದ ಜನರಿಗೆ ಮಂಕು ಬೂದಿ ಎರಚುವ ಜನರಿಂದ ಜಾಗೃತಿಯಿಂದಿರಲು ಕರೆ ನೀಡಿದರು.

ಜಿಲ್ಲಾ ಕಾರ್ಯದರ್ಶಿ ಹೊನ್ನಪ್ಪ ಲಕ್ಕಮ್ಮನವರ, ಹಸೀನಾ ಸಮುದ್ರಿ, ರಾಠೋಡ, ಮಹಾಂತೇಶ.ಟಿ., ಎಲ್.ಆಯ್.ಲಕ್ಕಮ್ಮನವರ, ಕೆ.ಜಿ.ನಾಡಗೇರ, ಶಿವು ಬನ್ನಿಗಿಡದ ಮುಂತಾದವರು ಹಾಜರಿದ್ದರು.

ಬಸವರಾಜ ಕುಕನೂರ ಸ್ವಾಗತಿಸಿದರು.  ಮಂಗಳಾ ಬನ್ನಿಗಿಡದ ನಿರೂಪಿಸಿದರು. ಬಸಮ್ಮ ಪೂಜಾರ ವಂದಿಸಿದರು.


ಹೆಬ್ಬಳ್ಳಿಯಲ್ಲಿ ಪವಾಡ ರಹಸ್ಯ ಬಯಲು

ಹೆಬ್ಬಳ್ಳಿಯಲ್ಲಿ ಪವಾಡ ರಹಸ್ಯ ಬಯಲು

Monday, December 24, 2012

KJVS Committees Formation



ರಾಜ್ಯದ ಇಪ್ಪತ್ತೆಂಟು ಜಿಲ್ಲೆಗಳಲ್ಲಿ ಕೆಜೆವಿಎಸ್ ಸದಸ್ಯತ್ವ ನೋಂದಣಿಯಾಗಿದ್ದು ಸದಸ್ಯತ್ವ ಆಗಿರುವ ಎಲ್ಲೆಡೆ ಸಮಿತಿಗಳನ್ನು ರಚನೆ ಮಾಡಲು ರಾಜ್ಯ ಸಮಿತಿ ಮನವಿ ಮಾಡಿದೆ.

ಸ್ಥಳೀಯ ಸಮಿತಿ: ಹತ್ತು ಜನ ಸದಸ್ಯರಿರುವ ಕಡೆಗಳಲ್ಲಿ ಸ್ಥಳೀಯ ಸಮಿತಿಯನ್ನು ರಚನೆ ಮಾಡುವುದು. ಸ್ಥಳೀಯ ಸಮಿತಿಯಲ್ಲಿ ಒಬ್ಬರು ಅಧ್ಯಕ್ಷರು, ಉಪಾಧ್ಯಕ್ಷರು, ಕಾರ್ಯದರ್ಶಿ, ಸಹ ಕಾರ್ಯದರ್ಶಿ, ಖಜಾಂಚಿ ಹಾಗೂ ಐದು ಜನ ಕಾರ್ಯಕಾರಿ ಸಮಿತಿ ಸದಸ್ಯರಿರುತ್ತಾರೆ. ಇದರಂತೆ ಸಮಿತಿಯನ್ನು ರಚಿಸಿ ಎಲ್ಲ ಸದಸ್ಯರ ವಿಳಾಸ, ದೂರವಾಣಿ, ಈಮೇಲ್ ಇತರ ವಿವರಗಳನ್ನು ರಾಜ್ಯ ಕಛೇರಿಗೆ ಕಳಿಸಿಕೊಡುವುದು.

ತಾಲೂಕು ಸಮಿತಿ: ಇಪ್ಪತ್ತು ಜನ ಸದಸ್ಯರಿರುವ ಕಡೆಗಳಲ್ಲಿ ಅಥವಾ ಎರಡು ಸ್ಥಳೀಯ ಸಮಿತಿಗಳಿರುವ ತಾಲೂಕುಗಳಲ್ಲಿ ತಾಲೂಕು ಸಮಿತಿಯನ್ನು ರಚನೆ ಮಾಡುವುದು. ತಾಲೂಕು ಸಮಿತಿಯಲ್ಲಿ ಒಬ್ಬರು ಅಧ್ಯಕ್ಷರು, ಉಪಾಧ್ಯಕ್ಷರು, ಕಾರ್ಯದರ್ಶಿ, ಸಹ ಕಾರ್ಯದರ್ಶಿ, ಖಜಾಂಚಿ ಹಾಗೂ ಎಂಟು ಜನ ಕಾರ್ಯಕಾರಿ ಸಮಿತಿ ಸದಸ್ಯರಿರುತ್ತಾರೆ. ಇದರಂತೆ ಸಮಿತಿಯನ್ನು ರಚಿಸಿ ಎಲ್ಲ ಸದಸ್ಯರ ವಿಳಾಸ, ದೂರವಾಣಿ, ಈಮೇಲ್ ಇತರ ವಿವರಗಳನ್ನು ರಾಜ್ಯ ಕಛೇರಿಗೆ ಕಳಿಸಿಕೊಡುವುದು.

ಜಿಲ್ಲಾ ಸಮಿತಿ: ಒಂದು ಜಿಲ್ಲೆಯಲ್ಲಿ ಎರಡು ಅಥವಾ ಅದಕ್ಕಿಂತ ಹೆಚ್ಚಿನ ಕೆಜೆವಿಎಸ್ ತಾಲೂಕು ಸಮಿತಿಗಳಿದ್ದಲ್ಲಿ ಕೆಜೆವಿಎಸ್ ಜಿಲ್ಲಾ ಸಮಿತಿಯನ್ನು ರಚಿಸುವುದು. ಜಿಲ್ಲಾ ಸಮಿತಿಯಲ್ಲಿ ಒಬ್ಬರು ಅಧ್ಯಕ್ಷರು, ಕಾರ್ಯದರ್ಶಿ, ಖಜಾಂಚಿ ಹಾಗೂ ಎರಡು ಜನ ಉಪಾಧ್ಯಕ್ಷರು, ಎರಡು ಜನ ಸಹಕಾರ್ಯದರ್ಶಿಗಳಿರಬಹುದು. ಇವರುಗಳ ಜೊತೆಗೆ ಎಂಟು ಜನ ಕಾರ್ಯಕಾರಿ ಸಮಿತಿ ಸದಸ್ಯರಿರುತ್ತಾರೆ.

ಸಮಿತಿ ಸಭೆಗಳು: ಸ್ಥಳೀಯ ಸಮಿತಿ ಹಾಗೂ ತಾಲೂಕು ಸಮಿತಿಗಳು  ಕನಿಷ್ಟ ತಿಂಗಳಿಗೊಮ್ಮೆ ಹಾಗೂ ಜಿಲ್ಲಾ ಸಮಿತಿ ಕನಿ ಕನಿಷ್ಟ ಎರಡು ತಿಂಗಳಿಗೊಮ್ಮೆ ಸಭೆ ಸೇರುವುದು. ತುರ್ತು ಸಂದರ್ಭದಲ್ಲಿ ಅಗತ್ಯಕ್ಕೆ ತಕ್ಕಂತೆ ಸಭೆ ಸೇರುವುದು. ಸಭೆ ನಡೆದ ವಿವರಗಳನ್ನು ನಿಗಧಿತ ನಮೂನೆಯಲ್ಲಿ ತುಂಬಿಸಿ ರಾಜ್ಯ ಕಛೇರಿಗೆ ಕಳಿಸುವುದು.

Tuesday, November 27, 2012

KJVS Activists Meeting at Harapanahalli


Invitation for KJVS activists meeting at Harapanahalli, Davangere District
on 23rd Dec 2012 (from 2.30 to 4pm).
State Secretary of KJVS, Mr.E.Basavaraju will participate in this programme.

Friday, November 16, 2012

Dharwad District Committee of KJVS formed

Dharwad District Committee of KJVS was formed recently.
ವಿಜ್ಞಾನವನ್ನು ಜನಪ್ರಯಗೊಳಿಸಿ;
ವೈಜ್ಞಾನಿಕ ಚಿಂತನೆ, ಪರಿಸರ ಸಂರಕ್ಷಣೆಗೆ ಮುಂದಾಗಲು ಕರೆ
Mr.Nadaf was elected as President and Mr.Honnappa Lakkammanavar was elected as Secretary of Dharwad KJVS. Mr.H.Chandrappa, Joint Secretary represented the state committee. In the program, Sumangala Koudennavar, a member of KJVS who got elected as TP president of Dharwad Taluk Panchayath was hornored.

Sumangala Koudennavar was honoured in this program

 Mr.H.Chandrappa felicitated a student Deepak Bhajantri, 
who is well verse with maths tables up to one thousand.
ಧಾರವಾಡ ನವ್ಹಂಬರ 15: ಗುಣಮಟ್ಟದ ಶಿಕ್ಷಣ, ಆರೋಗ್ಯಕ್ಕಾಗಿ ಜನಸಮುದಾಯವನ್ನು ಸಂಘಟಿಸುವುದು ಮತ್ತು ಕಾರ್ಯಕ್ರಮವನ್ನು ರೂಪಿಸಲು ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ಮುಂದಾಗಬೇಕೆಂದು ಧಾರವಾಡ ತಾಲುಕ ಪಂಚಾಯತ ಅಧ್ಯಕ್ಷೆ ಶ್ರೀಮತಿ ಸುಮಂಗಲಾ ಕೌದೆಣ್ಣವರ ಕರೆ ನೀಡಿದರು.
ಅವರು ಧಾರವಾಡದ ಕೆ.ಸಿ.ಪಾರ್ಕನಲ್ಲಿ ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ಹಮ್ಮಿಕೊಂಡ ಅಭಿನಂದನಾ ಸಮಾರಂಭದಲ್ಲಿ ಪಾಲ್ಗೊಂಡು, ವಿಜ್ಞಾನವನ್ನು ಜನಪ್ರೀಯಗೊಳಿಸಲು ವೈಜ್ಞಾನಿಕ ಚಿಂತನೆ, ಪರಿಷರ ಸಂರಕ್ಷಣೆ ಮುಂತಾದ ಕಾರ್ಯಕ್ರಮವನ್ನು ಹಮ್ಮಿಕೊಳ್ಳುವುದರ ಮೂಲಕ ಸುಸ್ಥಿರ ಅಭಿವೃದ್ಧಿ ಮಾಡುವುದು ತೀರಾ ಅಗತ್ಯವಿದೆ ಎಂದರು.
ಮುಖ್ಯ ಅತಿಥಿಯಾಗಿದ್ದ ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿಯ ರಾಜ್ಯ ಸಹಕಾರ್ಯದರ್ಶಿ ಎಚ್.ಚಂದ್ರಪ್ಪ ಗುಣಮಟ್ಟದ ಶಿಕ್ಷಣ, ಆರೋಗ್ಯಕ್ಕಾಗಿ ಜನಸಮುದಾಯವನ್ನು ಸಂಘಟಿಸುವುದರ ಮತ್ತು ಕಾರ್ಯಕ್ರಮಗಳನ್ನು ರೂಪಿಸುವುದು ಸೇರಿದಂತೆ, ಶಿಕ್ಷಣದ ಸಾರ್ವತ್ರಿಕರಣಕ್ಕೆ ಸಂಬಂಧಿಸಿದಂತೆ ಪೂರಕ ಕಾರ್ಯಕ್ರಮಗಳನ್ನು ರೂಪಿಸಲು ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ಉಗಮವಾಗಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಗೌರವಾಧ್ಯಕ್ಷ ನಾಗಪ್ಪ ತಿರ್ಲಾಪೂರ ಜನರಲ್ಲಿ ಮೂಢನಂಬಿಕೆ, ಅಜ್ಞಾನ, ಅನಕ್ಷರತೆ ಇನ್ನೂ ಜೀವಂತವಾಗಿದ್ದು, ಸಾಮಾಜಿಕ ಪಿಡುಗುಗಳ್ನನು ನಾಶ ಮಾಡಲು ಪ್ರಗತಿಪರ ಚಿಂತನೆಯ ಅವಶ್ಯಕತೆಯಿದೆ ಎಂದರು.
ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯರ ಎಲ್.ಆಯ್.ಲಕ್ಕಮ್ಮನವರ, ಜಿ.ಎಮ್.ನದಾಫ, ಗಿರಿಮಲ್ಲಯ್ಯ ಉಮಚಗಿಮಠ, ಪ್ರಮಿಳಾ ಜಕ್ಕಣ್ಣವರ, ಎಂ.ಟಿ.ರಾಠೋಡ, ಹೊನ್ನಪ್ಪ ಲಕ್ಕಮ್ಮನವರ, ಗಂಗಾಧರ ನಾಯ್ಕರ, ಶಿವಬಸವ ಜೋತಿ, ಬಸವರಾಜ ಕೆರೂರ, ಭಾರತಿ ಹಿರೇಮಠ, ವಿ.ಟಿ.ಭಜಂತ್ರಿ, ಎಲ್.ವಾಯ್.ದೊಡಮನಿ ಮುಂತಾದವರು ಉಪಸ್ಥಿತರಿದ್ದರು.
ಹೊನ್ನಪ್ಪ ಲಕ್ಕಮ್ಮನವರ ಸ್ವಾಗತಿಸಿದರು. ಜಿ.ಎಂ.ನದಾಫ ನಿರೂಪಿಸಿದರು. ಗಂಗಾಧರ ನಾಯ್ಕರ ವಂದಿಸಿದರು.
ಇದೇ ಸಂದರ್ಭದಲ್ಲಿ ತಾಲೂಕ ಪಂಚಾಯತ ಅಧ್ಯಕ್ಷೆ ಶ್ರೀಮತಿ ಸುಮಂಗಲಾ ಕೌದೆಣ್ಣವರ ಹಾಗೂ ಸಾವಿರ ಮಗ್ಗಿಗಳ ಸರದಾರ ದೀಪಕ ಭಜಂತ್ರಿ ಇವರನ್ನು ಸನ್ಮಾನಿಸಲಾಯಿತು.

Monday, November 5, 2012

ಹಾಸನದಲ್ಲಿ KJVS ಕಾರ್ಯಕರ್ತರ ಸಭೆ

ದಿನಾಂಕ 3.11.2012 ರಂದು ಹಾಸನದಲ್ಲಿ ಹಾಸನ ಹಾಗು ಮೈಸೂರು ಜಿಲ್ಫ್ಲೆಯ ಕೆ ಜೆ ವಿ ಸ ಕಾರ್ಯಕರ್ತರ ಸಭೆ ನಡೆಯಿತು. ಸಭೆಯಲ್ಲಿ ರಾಜ್ಯ ಕಾರ್ಯದರ್ಶಿ ಈ ಬಸವರಾಜು ಸ ಹ ಕಾರ್ಯದರ್ಶಿ ಕೆ ಹೆಚ್ ಗಿರೀಶ್, ಇಸಿ ಸದಸ್ಯರಾದ ಆರ್ ಉಮೇಶ್ ಮತ್ತು ಎರಡು ಜಿಲ್ಲೆಗಳ ಕಾರ್ಯಕರ್ತರು ಭಾಗವಹಿಸಿದ್ದರು ಸಂಗತನೆಯನ್ನು ಬಲಪಡಿಸಲು ಹಾಗು ಕಾರ್ಯಕ್ರಮಗಳನ್ನು ಸಂಗತಿಸಲು ತೀರ್ಮಾನಿಸಲಾಯ್ತು.
ತೀರ್ಮಾನಗಳು:
1. ನವೆಂಬೆರ್ 10 ರೊಳಗೆ ಸದಸ್ಯತ್ಫ್ವವನ್ನು ಪೂರ್ಣಗೊಳಿಸುವುದು 
2. ನವೆಂಬೆರ್ 18 ರೊಳಗೆ ತಾಲೂಕು ಸಮಿತಿಗಲ್ನನ್ನು ರಚಿಸುವುದು \
3.ಡಿಸೆಂಬರ್ 9 ರಂದು ಹಾಸನ ಜಿಲ್ಲಾ ಸಮಾವೇಶ ನಡೆಸುವುದು 4. ಪ್ರತಿ ತಿಂಗಳು ತಾಲೂಕು ಸಮಿತಿಗಳು ಸಭೆ ಸೇರುವುದು 
6. ಎಲ್ಲ ಕಾತುವತಿಕೆಗಳ ವರದಿಗಳನ್ನು ರಾಜ್ಯ ಕಚೇರಿಗೆ ನಿಗದಿತ ನಮೂನೆಯಲ್ಲಿ ತಿಮ್ಬಿಸಿ ಕಳಿಸುವುದು 7

7. ಶಾಲೆಗಳು ಹಾಗು ಕಾಲೇಜುಗಳಲ್ಲಿ ಖಗೋಳ ವಿಜ್ಞಾನಕ್ಕೆ ಸಂಭಂದಿಸಿದ ಉಪನ್ಯಾಸಗಳನ್ನು ಸಂಗತಿಸುವುದು.

Monday, October 8, 2012

Tribute to BA Chidambaraiah

Tribute to BA Chidambaraiah, Vice President of Karnataka Jnana Vijnana Samithi (KJVS) 
arranged on 14th October 2012 at Tumkur.
Venue: Hotel Owners' Association Building, Near Stadium, Tumkur.

Friday, September 28, 2012

ಚಿದಂಬರಯ್ಯನವರಿಗೆ ಶ್ರದ್ಧಾಂಜಲಿ



ಅಕಾಲದಲ್ಲಿ ನಮ್ಮನಗಲಿದ ಚಿದಂಬರಯ್ಯನವರು


File  Photo  of  KJVS Execom Meeting held at Tumkur in March 2012 
 in which Sri BA Chidambaraiah participated.



ದಿನಾಂಕ ೨೬.೦೯.೨೦೧೨ರ ಬೆಳಿಗ್ಗೆ ನಮಗೆ ಶುಭೋದಯವಾಗಿರಲಿಲ್ಲ. ಗೆಳೆಯ ಬಿ.ಉಮೇಶ್ ಅವರು ಕರೆ ಮಾಡಿ ಚಿದಂಬರಯ್ಯನವರು ತೀರಿಕೊಂಡ್ರಂತೆ? ನಿಜವ? ಎಂದರು. ಅವರಿಗೆ ಇನ್ನೂ ಖಾತರಿಯಾಗಿರಲಿಲ್ಲ. ತಕ್ಷಣ ನಾನು ಚಿದಂಬರಯ್ಯ ಅವರ ಮೊಬೈಲ್ ಗೆ ಕರೆ ಮಾಡಿದೆ. ಅವರ ಸೊಸೆ ತೆಗೆದುಕೊಂಡು ಹೌದು ಎಂದು ದುಃಖಿತರಾದರು. ಇದನ್ನು ನಿರೀಕ್ಷಿಸಿರದ ನನಗೆ ಆಘಾತವಾಯ್ತು. ಕಡೆಗೂ ಅವರು ನಮ್ಮನ್ನು ಬಿಟ್ಟು ದೂರ ಹೋಗಿದ್ದರು.

೧೯೯೦ರ ಪ್ರಾರಂಭದಲ್ಲಿ ನಾವು ಭಾರತ ಜ್ಞಾನ ವಿಜ್ಞಾನ ಜಾಥಾ ಸಂಘಟಿಸಬೇಕಾದಾಗ ಅದಕ್ಕೊಂದು ಸ್ವಾಗತ ಸಮಿತಿ ರಚಿಸಬೇಕಿತ್ತು. ಆಗ ನಮ್ಮೊಂದಿಗೆ ಸೇರಿಕೊಂಡು ಅದರ ಅಧ್ಯಕ್ಷತೆ ವಹಿಸಿಕೊಂಡವರು ಶ್ರೀ ಬಿ.ಎ.ಚಿದರಂಬರಯ್ಯ ನವರು. ಮೊದಲ ಸಭೆ ಅವರ ಮನೆಯಲ್ಲಿಯೇ ನಡೆಯಿತು. ಅಂದು ಪ್ರಾರಂಭವಾದ ಅವರ ಆತಿಥ್ಯ ಇಂದಿಗೂ ಹಾಗೆಯೇ ಮುಂದುವರೆದಿದೆ. ಭಾರತ ಜ್ಞಾನ ವಿಜ್ಞಾನ ಜಾಥಾ ಅಕ್ಟೋಬರ್ ೨ ರಿಂದ ನವೆಂಬರ್ ೧೪ರ ವರೆಗೆ ತುಮಕೂರು ಜಿಲ್ಲೆಯಲ್ಲಿ ೪೫ ದಿನಗಳ ಕಾಲ ಸುಮಾರು ೧೨೦ ಪ್ರದರ್ಶನ ನೀಡಿತು. ಅದಕ್ಕೆ ಅಗತ್ಯವಾದ ತಯಾರಿಗೆ ನೆರವಾಗುವುದರ ಜೊತೆಗೆ ಪ್ರತಿ ವಾರಕ್ಕೊಮ್ಮೆ ಜಾಥಾ ಇರುವ ಸ್ಥಳಕ್ಕೆ ಕುಟುಂಬ ಸಮೇತರಾಗಿ ಅವರು ಬರುತ್ತಿದ್ದರು. ಬರುವಾಗ ಜಾಥಾ ತಂಡದಲ್ಲಿದ್ದ ಕಾರ್ಯಕರ್ತರು ಹಾಗೂ ಕಲಾವಿದರಿಗೆ ಕಜ್ಜಾಯ ಹಾಗೂ ಇತರೆ ಸಿಹಿ ತಿನಿಸುಗಳನ್ನು ತರುತ್ತಿದ್ದರು. ಜಾಥಾ ಸಮಾರೋಪ ಆದ ನಂತರ ಅದರ ಬಗ್ಗೆ ನವೀನ್ ಎಸ್ಟೇಟ್ ನಲ್ಲಿ ಒಂದು ಸಭೆ ಏರ್ಪಡಿಸಿ ಎಲ್ಲ ಕಾರ್ಯಕರ್ತರಿಗೂ ಊಟ ಹಾಕಿಸಿ ಉತ್ಸಾಹ ತುಂಬಿದ್ದರು.

ಜಾಥಾದೊಂದಿಗೆ ಪ್ರಾರಂಭಗೊಂಡ ನಮ್ಮ ಸಂಬಂಧ ಎಂದೂ ಯಾವ ಕಾರಣಕ್ಕೂ ತೊಂದರೆಗೆ ಸಿಲುಕಲಿಲ್ಲ. ಅದೇ ಉತ್ಸಾಹ ಹಾಗೂ ಪ್ರೀತಿಯಿಂದ ನಿರಂತರವಾಗಿ ಅವರು ತುಮಕೂರು ವಿಜ್ಞಾನ ಕೇಂದ್ರ, ಭಾರತ ಜ್ಞಾನ ವಿಜ್ಞಾನ ಸಮಿತಿಗೆ ತಮ್ಮ ಕೈಲಾದ ಎಲ್ಲ ನೆರವನ್ನೂ ನೀಡಿ ದುಡಿದರು. ಅವರ ನವೀನ್ ಎಸ್ಟೇಟ್ ನಮ್ಮ ಅನೇಕ ಕಾರ್ಯಕ್ರಮಗಳಿಗೆ ತಾಣವಾಯಿತು. ೧೯೯೩ರಲ್ಲಿ ನಡೆದ ರಾಷ್ಟ್ರಮಟ್ಟದ ಮಹಿಳಾ ಕಲಾ ಜಾಥಾ ತುಮಕೂರಿಗೆ ಆಗಮಿಸಿದಾಗ ಅದರ ಸ್ವಾಗತ ಸಮಿತಿಯ ಅಧ್ಯಕ್ಷರಾಗಿ ಶ್ರೀಮತಿ ಚಂದ್ರ ಚಿದಂಬರಯ್ಯ ಕಾರ್ಯನಿರ್ವಹಿಸಿದರು. ೨೦೦೩ರಲ್ಲಿ ನಾವು ಸಂಘಟಿಸಿದ್ದ ಪ್ರಥಮ ಶೈಕ್ಷಣಿಕ ಸಮಾವೇಶಕ್ಕೆ ಚಿದಂಬರಯ್ಯನವರದೇ ಧೈರ್ಯ ಹಾಗೂ ಸಾರಥ್ಯ. ಆ ಸಂದರ್ಭದಲ್ಲಿ ಅಧಿಕಾರಿಯೊಬ್ಬರು ವಿನಾಕಾರಣ ನಮಗೆ ವಿರೋಧಿಯಾದರೂ ಸಹ ಅದ್ಯಾವುದನ್ನೂ ಲೆಕ್ಕಿಸದೇ ನಮ್ಮೊಂದಿಗೆ ನಿಂತು ಆ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದವರು ಚಿದಂಬರಯ್ಯನವರು.

ಅವರ ಶ್ರೀಮತಿಯವರಾದ ಚಂದ್ರಚಿದಂಬರಯ್ಯ ಅವರೂ ಸಹ ಬಿಜಿವಿಎಸ್ ನ ಪ್ರಥಮ ರಾಜ್ಯ ಸಮಿತಿಯಲ್ಲಿ ಉಪಾಧ್ಯಕ್ಷರಾಗಿದ್ದರು. ಸಮತಾ ಸಂಚಾಲಕರಾಗಿದ್ದರು. ನಮಗೆಲ್ಲಾ ಚಂದ್ರಕ್ಕ ಆಗಿದ್ದರು. ಸದಾ ನಗುವಿನೊಂದಿಗೆ ನಮ್ಮನ್ನು ಸ್ವಾಗತಿಸುತ್ತಿದ್ದರು. ಇದು ಕೇವಲ ನಮ್ಮ ಅನುಭವ ಮಾತ್ರವಲ್ಲ. ಅವರ ಮನೆಗೆ ಭೇಟಿ ನೀಡಿರುವ ಎಲ್ಲರ ಅಭಿಪ್ರಾಯವು ಇದೇ ಆಗಿದೆ. 

ಕೆಲವು ಸಂಘಟನಾತ್ಮಕ ಕಾರಣಗಳಿಂದಾಗಿ ಅನಿವಾರ್ಯವಾಗಿ ನಾವು ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ರಚಿಸುವ ನಿರ್ಧಾರಕ್ಕೆ ಬಂದೆವು. ಅದರ ಸಂಬಂಧವಾಗಿ ಅವರ ಮನೆಯಲ್ಲಿ ನಾವು ಸಾಕಷ್ಟು ಸಲ ಚರ್ಚೆ ನಡೆಸಿದ್ದೆವು. ಕಡೆಗೆ ಅವರು ನಿಂತದ್ದು ನಮ್ಮೊಂದಿಗೆ. ಯಾವುದು ಸರಿ, ಯಾವುದು ತಪ್ಪು ಅನ್ನೋದು ನನಗೆ ಗೊತ್ತಾಗಿದೆ, ಇದನ್ನು ಬೆಳೆಸೋಣ ನಿಮ್ಮೊಂದಿಗಿರುವೆ ಎಂದರು. ರಾಜ್ಯ ಸಮಿತಿಯ ಉಪಾಧ್ಯಕ್ಷರಾಗಿರಿ ಎಂದು ನಾವು ಕೇಳಿಕೊಂಡಾಗ ನನ್ನ ಆರೋಗ್ಯ ಸರಿ ಇಲ್ಲ, ಆದರೂ ನಿಮ್ಮ ಇಷ್ಟದಂತೆ ಇರುತ್ತೇನೆ ಎಂದು ಹೇಳಿದ ಅವರು ಅನೇಕ ಉಪಯುಕ್ತವಾದ ಸಲಹೆಗಳನ್ನು ನಮಗೆ ನೀಡಿದರು.

ಸತತ ೨೨ ವರ್ಷಗಳ ನಿರಂತರ ಸಂಪರ್ಕದಲ್ಲಿದ್ದ ಅವರನ್ನು ಮರೆಯೋದು ಅಷ್ಟು ಸುಲಭ ಅಲ್ಲ. ಅವರು ಇಷ್ಟು ಬೇಗನೆ ನಮ್ಮನ್ನಗಲುತ್ತಾರೆ ಅನ್ನುವ ಯಾವುದೇ ಸೂಚನೆ ನಮಗಿರಲಿಲ್ಲ. ಚಂದ್ರಕ್ಕ ಅವರ ನಿಧನದ ನಂತರ ಅವರು ತುಂಬಾ ನೊಂದಿದ್ದರು ಎಂಬುದು ನಮಗೆ ತಿಳಿದಿತ್ತಾದರೂ, ಈ ರೀತಿ ಆಗುತ್ತದೆ ಎಂದು ಅಂದುಕೊಂಡಿರಲಿಲ್ಲ. ಅವರ ಅಗತ್ಯ ನಮಗೂ ಇತ್ತು, ಅವರ ಕುಟುಂಬಕ್ಕೂ ತುಂಬಾ ಇತ್ತು ಎಂಬುದನ್ನು ಹೇಳಬೇಕಾಗಿಲ್ಲ. ಕಳೆದ ವಾರವಷ್ಟೇ ದೂರವಾಣಿ ಕರೆ ಮಾಡಿ ನಾನು ಪದಾಧಿಕಾರಿಗಳ ಸಭೆಗೆ ಬರಲಾಗಲಿಲ್ಲ, ಏನೂ ತಿಳಿದುಕೊಳ್ಳಬೇಡಿ. ನಾನು ಸದಾ ನಿಮ್ಮೊಂದಿಗಿದ್ದೇನೆ, ಒಮ್ಮೆ ಭೇಟಿಯಾಗೋಣ, ಏನೋ ಹೇಳುವುದಿದೆ ಎಂದರು. ಅದೇನೆಂದು ಕೇಳುವ ಆತುರವನ್ನು ನಾನು ಮಾಡಲಿಲ್ಲ. ಅದೇ ನಾನು ಅವರೊಂದಿಗೆ ಕಡೆಯದಾಗಿ ಮಾತಾಡಿದ್ದು. ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ಒಬ್ಬ ಒಳ್ಳೆಯ, ಸಹೃದಯ ಪೋಷಕರೊಬ್ಬರನ್ನು ಕಳೆದುಕೊಂಡಿದೆ. ಅವರು ನಮ್ಮ ದೊಡ್ಡ ಕುಟುಂಬಕ್ಕೆ ಮುಖ್ಯಸ್ಥರಂತಿದ್ದರು. ಸಂಪೂರ್ಣ ನಿಸ್ವಾರ್ಥದಿಂದ ದುಡಿದ ಅವರಿಗೆ ನಮ್ಮ ಭಾವಪೂರ್ಣ ಶ್ರದ್ಧಾಂಜಲಿ. ನಾವಿರುವ ತನಕ ಅವರು ನಮ್ಮೊಂದಿಗಿರುತ್ತಾರೆ ಎಂದರೆ ಅತಿಶಯೋಕ್ತಿಯಾಗಲಾರದು.

ಚಿದಂಬರಯ್ಯ ಅವರದು ವೈವಿದ್ಯಮಯ ವ್ಯಕ್ತಿತ್ವ ಎನ್ನುವುದಕ್ಕೆ ಅವರಿಗಿದ್ದ ಸಂಪರ್ಕವೇ ಸಾಕ್ಷಿ. ಅವರು ಒಬ್ಬ ರೈತ, ಒಬ್ಬ ಕೈಗಾರಿಕಾ ಉದ್ಯಮಿ. ಇವೆರಡು ವರ್ಗಗಳ ಸಂಪರ್ಕದ ಜೊತೆಗೆ ಅವರಿಗೆ ಅನೇಕ ರೀತಿಯ ಸಂಪರ್ಕವಿತ್ತು. ತುಮಕೂರಿನ ವಿವಿಧ ಸಂಘಟನೆಗಳು, ಸರ್ಕಾರಿ ಅಧಿಕಾರಿಗಳು, ರಾಜ್ಯದಾದ್ಯಂತ ಪ್ರಗತಿಪರ ಚಿಂತಕರು, ಬರಹಗಾರರು, ಸಾಹಿತಿಗಳು ಹೀಗೆ ಅವರ ಪರಿಚಯದ ಹರವು ವಿಸ್ತಾರವಾಗಿತ್ತು. ಇದಕ್ಕೆ ಕಾರಣವೆಂದರೆ ಇತರರು ಹೇಳುವುದನ್ನು ಗಮನವಿಟ್ಟು ಗೌರವ ಭಾವನೆಯಿಂದ ಕೇಳಿಸಿಕೊಳ್ಳುತಿದ್ದುದೇ ಕಾರಣವಿರಬಹುದು ಎನಿಸುತ್ತದೆ. 

ಪ್ರಜಾವಾಣಿಯ ಖ್ಯಾತ ಅಂಕಣಕಾರರಾದ ಶ್ರೀ ದಿನೇಶ್ ಅಮೀನ್ ಮಟ್ಟು, ಸಾಹಿತಿಗಳಾದ ಡಾ.ಕೆ.ಪುಟ್ಟಸ್ವಾಮಿ, ಡಾ.ಕೆ.ವೈ.ನಾರಾಯಣಸ್ವಾಮಿ, ಅತ್ತಿಹಳ್ಳಿದೇವರಾಜು, ಪ್ರೊ.ಎಸ್.ಜಿ.ಸಿದ್ದರಾಮಯ್ಯ(ಇಲ್ಲಿ ಕೆಲವರ ಹೆಸರನ್ನಷ್ಟೇ ಬರೆದಿದೆ), ಅಧಿಕಾರಿಗಳಾದ ಶ್ರೀ ಸಿದ್ದಯ್ಯ, ಐ.ಆರ್.ಪೆರುಮಾಳ್ ಹೀಗೆ ಚಿದಂಬರಯ್ಯ ಅವರ ಬಳಗ ವಿಸ್ತಾರವಾಗುತ್ತಲೇ ಹೋಗುತ್ತದೆ. ಇತ್ತೀಚೆಗೆ ನಾವು ಶೇಟ್ಟಿಹಳ್ಳಿಪಾಳ್ಯದಲ್ಲಿ ಸಸಿ ನೆಡುವ ಕಾರ್ಯಕ್ರಮ ಮಾಡಿದಾಗ ಚಿದಂಬರಯ್ಯನವರು ಆಗಮಿಸಿ ಒಂದು ಸಂಪಿಗೆ ಸಸಿ ನೆಟ್ಟಿದ್ದರು. ಅದೇ ದಿನ ತುಮಕೂರು ಸ್ಟೇಡಿಯಂ ನಲ್ಲಿ ನಡೆದ ಅಂತಾರಾಷ್ಟ್ರೀಯ ಖ್ಯಾತ ಆಟಗಾರ್ ವಾಲಿಬಾಲ್ ವೀಕ್ಷಿಸಿ ಹಿರಿಯ ಆಟಗಾರರಿಗೆ ಗೌರವವನ್ನು ಸಲ್ಲಿಸಿದ್ದರು.

ಚಿದಂಬರಯ್ಯನವರು ಪುಸ್ತಕ ಪ್ರೇಮಿಯಾಗಿದ್ದರು. ಸ್ವತಃ ಪುಸ್ತಕಗಳನ್ನು ಓದುವುದರ ಜೊತೆಗೆ ಪ್ರಗತಿಪರ ಸಾಹಿತ್ಯ ಅದರಲ್ಲಿಯೂ ಕುವೆಂಪು ಅವರ ಸಾಹಿತ್ಯವನ್ನು ಶಾಲಾ ಕಾಲೇಜುಗಳ ಗ್ರಂಥಾಲಯಗಳಿಗೆ ನೀಡುವುದರಲ್ಲಿ ಅವರು ತುಂಬಾ ಆಸಕ್ತಿಯನ್ನು ತೋರುತ್ತಿದ್ದರು. ಕ್ಯೂಬಾ ದೇಶಕ್ಕೆ ಅಮೆರಿಕೆ ಹಾಕಿದ್ದ ದಿಗ್ಭಂದನದ ವಿರುದ್ದ ಕ್ಯೂಬಾಕ್ಕೆ ನೆರವು ನೀಡಲು ಒಂದು ಸಮಿತಿ ರಚಿಸಕೊಂಡಿದ್ದೆವು. ಅದಕ್ಕೆ ಚಿದಂಬರಯ್ಯ ಅವರು ಅಧ್ಯಕ್ಷರಾಗಿ ಸಾಕಷ್ಟು ನೆರವು ಸಂಗ್ರಹಿಸಿ ಕಳಿಸಿಕೊಟ್ಟಿದ್ದೆವು. ನಾವು ತೊಡಗಿಸಿಕೊಳ್ಳುವ ಎಲ್ಲ ಕಾರ್ಯಕ್ರಮಗಳಿಗೂ ಅವರು ಬೆಂಬಲವಾಗಿ ನಿಲ್ಲುತ್ತಿದ್ದುದು ಅವರ ದೊಡ್ಡ ತನವಾಗಿತ್ತು.

-ಈ.ಬಸವರಾಜು, ಕಾರ್ಯದರ್ಶಿ, ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ


ಸರಳ ಸಜ್ಜನಿಕೆಯ ವ್ಯಕ್ತಿತ್ವ
ನನಗೆ ಚಿದಂಬರಯ್ಯನವರು ತೀರಾ ಪರಿಚಿತರೇನಲ್ಲ. ಕೇವಲ ನಾಲ್ಕು ತಿಂಗಳ ಹಿಂದಿನವರೆಗೆ ನಾನು ಅವರ ಹೆಸರನ್ನು ಕೇಳಿದ್ದೆನಷ್ಟೆ. ಜನ ವಿಜ್ಞಾನ ಚಳುವಳಿಯ ಒಂದು ಸಂಘಟನೆಯಲ್ಲುಂಟಾದ ಬೆಳವಣಿಗೆಯಿಂದ ಬೇಸತ್ತ ಕೆಲವರು ಸಮಾನ ಮನಸ್ಕರ ತೀರ್ಮಾನದಂತೆ ಮಾರ್ಚ್ ತಿಂಗಳಲ್ಲಿ ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ಪ್ರಾರಂಭಗೊಂಡಿತು. ಮಾರ್ಚಿ ೨೫ ರಂದು ಮೊದಲನೆಯ ಕಾರ್ಯಕಾರಿ ಸಮಿತಿ ಸಭೆಯನ್ನು ತುಮಕೂರಿನಲ್ಲಿ ಆಯೋಜಿಸಲಾಗಿತ್ತು.ಈ ಸಭೆಯಲ್ಲಿ ನನಗೆ ಚಿದಂಬರಯ್ಯನವರನ್ನು ಮೊದಲಬಾರಿಗೆ ವಿದ್ಯುಕ್ತವಾಗಿ ಪರಿಚಯಿಸಲಾಯಿತು. ವಾಸ್ತವಿಕವಾಗಿ ಆ ಸಭೆಯನ್ನು ತುಮಕೂರಿನಲ್ಲಿ ಆಯೋಜಿಸಲು ಅವರ ಒತ್ತಾಸೆ ಮತ್ತು ಬೆಂಬಲವೇ ಕಾರಣವಾಗಿತ್ತು ಎಂದರೆ ಅತಿಶಯೋಕ್ತಿಯಲ್ಲ.
ಮೊದಲ ಭೇಟಿಯಲ್ಲೇ ಅವರ ಬಗ್ಗೆ ನನ್ನ ಮನಸ್ಸಿನಲ್ಲಿ ಯಾವುದೋ ರೀತಿಯ ಗೌರವ ಭಾವನೆ ಉಂಟಾಯಿತು. ಅವರ ಸರಳತೆ, ಸಜ್ಜನಿಕೆ, ಸ್ನೇಹಪರ ವ್ಯಕ್ತಿತ್ವ ನನ್ನನ್ನು ಆಕರ್ಷಿಸಿತ್ತು ಎಂದರೆ ತಪ್ಪಾಗಲಾರದು. ಸಭೆಯಲ್ಲಿ ಕೆ.ಜೆ.ವಿ.ಎಸ್ ಸಂಘಟನೆಯ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯ್ತು. ನನ್ನನ್ನು ಮತ್ತು ಚಿದಂಬರಯ್ಯನವರನ್ನು ಉಪಾಧ್ಯಕ್ಷರಾಗಿ ಆಯ್ಕೆ ಮಾಡಲಾಯಿತು. ಈ.ಬಸವರಾಜು ಅವರು ನಮ್ಮನ್ನು ಸಭೆಗೆ ಪರಿಚಯಿಸಿದರು. ಆಗ ಚಿದಂಬರಯ್ಯನವರು ಮಾತನಾಡಿ, ನಾನು ಮತ್ತು ಅವರು ಹಾಸನದಲ್ಲಿ ನಡೆದ ಶೈಕ್ಷಣಿಕ ಹಬ್ಬದ ಸಮಾರಂಭದಲ್ಲಿ ವೇದಿಕೆ ಹಂಚಿಕೊಂಡಿದ್ದನ್ನು ಸ್ಮರಿಸುತ್ತಾ ಅವರಿಗೆ ನನ್ನ ಪರಿಚಯ ಇರುವುದಾಗಿ ಸಭೆಗೆ ತಿಳಿಸಿದರು. ಅಲ್ಲದೆ ನನ್ನ ಬಗ್ಗೆ ಕೆಲವು ಅಭಿಮಾನದ ಮಾತುಗಳನ್ನಾಡಿದರು. ನನಗೆ ಇದರಿಂದ ಮುಜುಗರವಾದರೂ ಅವರ ಬಗ್ಗೆ ಮನಸ್ಸಿನಲ್ಲಿ ಗೌರವ ಭಾವನೆ ಮೂಡಿಬಂದಿತ್ತು. ಏಕೆಂದರೆ ನನಗೆ ಆ ಬಗ್ಗೆ (ಹಾಸನದ ಕಾರ್ಯಕ್ರಮದ ಬಗ್ಗೆ) ನೆನಪಿರಲಿಲ್ಲ! ಇದಾದ ಮೇಲೆ ಮತ್ತೊಂದು ಕಾರ್ಯಕಾರಿ ಸಮಿತಿ ಸಭೆಯನ್ನು ತುಮಕೂರಿನಲ್ಲಿಯೇ ನಡೆಸಲಾಯಿತು. ಆಗ ಅವರ-ನನ್ನ ಎರಡನೇ ಭೇಟಿ. ಅವರ-ನನ್ನ ಮೂರನೇ ಭೇಟಿಗೆ ಕಾಲ ಕೂಡಿ ಬರಲೇ ಇಲ್ಲ! ಇದಕ್ಕೆ ವಿಧಿ ವಿಲಾಸ ಎನ್ನಬಹುದು. 

ಕೆ.ಜೆ.ವಿ.ಎಸ್ ಸಂಘಟನೆಯಲ್ಲಿ ಸಹ ಉಪಾಧ್ಯಕ್ಷರಾಗಿ ನಾವು ಇನ್ನು ಹಲವು ಬಾರಿ ಸಂಧಿಸಬಹುದು ಎಂಬ ನನ್ನ ನಿರೀಕ್ಷೆ ಹುಸಿಯಾಗಿದೆ. ಅವರು ಇಹಲೋಕ ತ್ಯಜಿಸಿದ ಸುದ್ಧಿ ತಿಳಿದು ಮನಸ್ಸಿಗೆ ಆಘಾತವಾಗಿದೆ. ಅವರ ಪತ್ನಿ ಮೊದಲೇ ಇಹಲೋಕ ತ್ಯಜಿಸಿದ್ದರೆಂದು ತಿಳಿಯಿತು. ಬಹುಶಃ ಅವರ ಕರೆಯಂತೆ ಇವರು ಇಷ್ಟು ಬೇಗನೆ ಆ ಲೋಕಕ್ಕೆ ತೆರಳಿರಬಹುದೇ? ಏಕೆಂದರೆ ಸಾಮಾನ್ಯವಾಗಿ ೬೫-೭೦ ಸಾಯುವ ವಯಸ್ಸಲ್ಲ. 

ಏನೇ ಆಗಲಿ ಚಿದಂಬರಯ್ಯನವರ ಅಗಲಿಕೆ ಅವರ ಕುಟುಂಬವರ್ಗದವರಿಗೆ ಮತ್ತು ಅವರ ಸ್ನೇಹವರ್ಗಕ್ಕಷ್ಟೇ ಅಲ್ಲದೆ ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿಗೆ ಸಹ ತುಂಬಲಾರದ ನಷ್ಟವಾಗಿದೆ. ದೇವರು ಅವರ ಆತ್ಮಕ್ಕೆ ಚಿರಶಾಂತಿಯನ್ನು ನೀಡಲಿ ಮತ್ತು ಅವರ ಅಗಲಿಕೆಯನ್ನು ಸಹಿಸಿಕೊಳ್ಳುವ ಶಕ್ತಿಯನ್ನು ಅವರ ಕುಟುಂಬವರ್ಗದವರಿಗೆ ನೀಡಲಿ ಎಂದು ಪ್ರಾರ್ಥಿಸುತ್ತೇನೆ.

 -ಈ.ನಂಜಪ್ಪ, ನಿವೃತ್ತ ಸಹ ನಿರ್ದೇಶಕರು(ಶಿಕ್ಷಣ ಇಲಾಖೆ) ಮತ್ತು ಉಪಾಧ್ಯಕ್ಷರು, ಕೆಜೆವಿಎಸ್ 

  
ಸ್ನೇಹ ಜೀವಿ
ಸ್ನೇಹಕ್ಕೆ ಮತ್ತೊಂದು ಹೆಸರು ಚಿದಂಬರಯ್ಯ. ಅವರು ಸದಾ ಸ್ನೇಹಜೀವಿಯಾಗಿದ್ದರು. ಅವರ ಮನೆಗೆ ಚಲನ ಚಿತ್ರ ನಟರಾದ ಅಂಬರೀಶ್, ಶ್ರೀನಾಥ್ ಖ್ಯಾತ ಗಾಯಕರಾದ ಸಿ.ಅಶ್ವಥ್ ಇಂಥವರೆಲ್ಲ ಭೇಟಿ ನೀಡಿದ್ದಾರೆ. ಇವರುಗಳ ಸ್ನೆಹವನ್ನು ಯಾವಾಗ ಹೇಗೆ ಗಳಿಸಿದರು ಎಂಬುದೇ ಅಚ್ಚರಿಯ ಸಂಗತಿ. ಅವರದು ಪರೋಪಕಾರಿ ಮನೋಭಾವ. ನಾನು ತುಮಕೂರು ವಿಜ್ಞಾನ ಕೇಂದ್ರದ ಕಾರ್ಯದರ್ಶಿಯಾಗಿದ್ದಾಗ ಅವರು ಅಧ್ಯಕ್ಷರಾಗಿದ್ದರು. ಆ ಅವಧಿಯಲ್ಲಿ ಕೇಂದ್ರಕ್ಕೆ ಕಟ್ಟಡವನ್ನು ಪಡೆಯಲು ಅವರ ನೆರವು ಅಪಾರವಾದದ್ದು. ಉದ್ಯಮಿಯಾಗಿದ್ದರೂ ಸಹ ವಿಜ್ಞಾನ, ತಂತ್ರಜ್ಞಾನ, ಪರಿಸರದ ಬಗ್ಗೆ ಅವರಿಗಿದ್ದ ಕಾಳಜಿ ಅಪಾರ. ಅವರು ಹೆಸರಘಟ್ಟದವರಾಗಿದ್ದರೂ ಸಹ ತುಮಕೂರು ನಗರದ ಬಗ್ಗೆ ಹೆಚ್ಚಿನ ಕಾಳಜಿ ಹೊಂದಿದ್ದು ಯಾವುದೇ ಜಾತಿ - ಮತ ಎನ್ನದೇ ಇಲ್ಲಿನ ಜನಮಾನಸದಲ್ಲಿ ಬೆರೆತು ಹೋಗಿದ್ದರು. 

-ತುಮಕೂರು ನಾಗಭೂಷಣ,
ಪ್ರಾಂಶುಪಾಲರು, ಸಿದ್ಧಗಂಗ ಪದವಿ ಕಾಲೇಜು



ಒಳ್ಳೆಯ ಒಡನಾಡಿ
ಚಿದಂಬರಯ್ಯ ಅವರು ನಮಗೆ ಒಳ್ಳೆಯ ಒಡನಾಡಿಯಾಗಿದ್ದರು. ಕುವೆಂಪು ವೇದಿಕೆಗೆ ಅವರು ಗೌರವಾಧ್ಯಕ್ಷರಾಗಿದ್ದರು, ನಾನು ಕಾರ್ಯಾಧ್ಯಕ್ಷನಾಗಿದ್ದೆ. ಒಟ್ಟಿಗೆ ಕೆಲಸ ಮಾಡಿಕೊಂಡು ಬಂದೆವು. ಕುವೆಂಪು ಸಾಹಿತ್ಯದ ಬಗ್ಗೆ, ಪ್ರಗತಿಪರ ಚಿಂತನೆ, ವೈಚಾರಿಕತೆ ಬಗ್ಗೆ ಅವರಿಗೆ ತುಂಬಾ ಆಸಕ್ತಿ ಇತ್ತು. ಈ ಬಗ್ಗೆ ಪುಸ್ತಕದ ಮನೆಯಲ್ಲಿ ನಾವು ಅನೇಕ ಬಾರಿ ಸಾಕಷ್ಟು ಸಮಯ ಚರ್ಚೆ ನಡೆಸುತ್ತಿದ್ದೆವು. ಇದು ಅನೇಕರಿಗೆ ತಿಳಿಯದು.

-ಪ್ರೊ. ಜಿ.ಎಂ.ಶ್ರೀನಿವಾಸಯ್ಯ,
 ನಿವೃತ್ತ ಪ್ರಾಂಶುಪಾಲರು

ಕೈ ಚೆಲ್ಲಿ ದಾನ-
ಮನಸ್ಸು ಬಿಚ್ಚಿ ಅನ್ನ ಹಾಕಿದವರು
ಚಿದಂಬರಯ್ಯ ಅವರು ಮದುವೆ ಆಗುವುದಕ್ಕೆ ಮುಂಚೆಯೇ ಹೆಸರಘಟ್ಟ ಸುತ್ತ ಮುತ್ತಲಿನ ಯುವಕರನ್ನು ಸಂಘಟಿಸಿ ಕಬ್ಬಡಿ ಟೀಂ ಮಾಡಿಕೊಂಡಿದ್ದರು. ಆ ಟೀಂ ತುಮಕೂರಿಗೆ ಬಂದಿದ್ದಾಗ ಅವರು ಅದರ ಮೇನೇಜರ್ ಆಗಿದ್ದರು. ಆ ತಂಡ ರಾಜ್ಯ ಮಟ್ಟದ ಟ್ರೋಪಿಯನ್ನು ತುಮಕೂರಿನಲ್ಲಿ ಗೆದ್ದಿತು. 
ಅವರ ಮನೆಯಲ್ಲಿ ಉಣ್ಣದವರೇ ಇಲ್ಲ. ಕೈ ಚೆಲ್ಲಿ ದಾನ, ಮನಸ್ಸು ಬಿಚ್ಚಿ ಅನ್ನ ಹಾಕಿದ ಕುಟುಂಬ ಅದು. ಅವರ ಗಂಡ ಹೆಂಡತಿ ಸಂಬಂಧ ಹೇಗಿತ್ತು ಎಂದರೆ ಯಾವುದಾದರೂ ಸಭೆಯನ್ನು ಅವರ ಮನೆಯಲ್ಲಿ ಕರೆದರೆ ಅಷ್ಟೂ ಜನರಿಗೆ ಅಡುಗೆ ಸಿದ್ದತೆಯನ್ನು ಚಂದ್ರಕ್ಕ ಮಾಡುತ್ತಿದ್ದರು. ಇದಕ್ಕೆ ಯಾವ ಸೂಚನೆಯೂ ಇರುತ್ತಿರಲಿಲ್ಲ. ಅಂಥ ಸಂಬಂಧ ಅವರಿಬ್ಬರದು. ಇದರ ಕೊರತೆಯನ್ನು ನಾವು ಈಗ ಕಾಣುತ್ತಿದ್ದೇವೆ. ಚಂದ್ರಕ್ಕ ಅವರ ಸಾವೇ ಚಿದಂಬರಯ್ಯ ಅವರಿಗೆ ದೊಡ್ಡ ಆಘಾತವಾಗಿತ್ತು.

-ಜಿ.ಎಸ್.ಸೋಮಶೇಖರ್(ಸೋಮಣ್ಣ)



 ಕೆಳಜಾತಿಗಳ ಪರವಾಗಿದ್ದವರು
ನನಗೆ ೧೯೮೩ರಲ್ಲಿ ರಾಮದಾಸ್ ಅವರ ಮೂಲಕ   ಚಿದಂಬರಯ್ಯ ಅವರ ಪರಿಚಯ ಆಯಿತು. ನಂತರ ೧೯೮೯ ರಲ್ಲಿ ಚುನಾವಣೆಗೆ ಸ್ಪರ್ಧಿಸಿದ್ದಾಗ ಅವರ ಮನೆಗೆ ಹೋಗಿದ್ದೆ. ಕರೆದದು ಹಣಸಹಾಯ ಮಾಡಿದರು. ಅಲ್ಲಿಂದ ಪರಿಚಯವಾಗಿ ಇಲ್ಲಿಯತನಕ ಮುಂದುವರೆಯಿತು. ಅವರು ಒಳ್ಳೆಯ ಚಿಂತಕರು ಮತ್ತು ಸಂಭಾವಿತ ವ್ಯಕ್ತಿ. ಸ್ನೇಹ ಜೀವಿ. ಕೆಳಜಾತಿಯವರಿಗೆ ಆದ್ಯತೆ ನೀಡುತ್ತಿದ್ದರುಅವರೊಂದಿಗೆ ಸದಾ ಇರುತ್ತಿದ್ದರು. ಅವರ ತಂದೆ   ಬಿ.ಎಂ.ಅಂಜಿನಪ್ಪ ಸ್ವತಂತ್ರ ಹೋರಾಟಗಾರರಾಗಿದ್ದು ಅವರ ಪ್ರಭಾವ ಇವರ ಮೇಲಿತ್ತು. 

-ನರಸೀಯಪ್ಪ,
ನಗರಸಭಾ ಸದಸ್ಯರುತುಮಕೂರು





 ಸಾಹಸ ಪ್ರವೃತ್ತಿ - ಜೀವಂತ ಉತ್ಸಾಹ
ನಾವು ಹೊಗೇನಕಲ್ ಗೆ ಪ್ರವಾಸ ಹೋಗಿದ್ದೆವು. ನಾನು ಹೆದರಿ ತೆಪ್ಪದಲ್ಲಿ ಹೋಗಲು ಹಾಗೂ ನೀರು ಬೀಳುವ ಜಾಗಕ್ಕೆ ಹೋಗಲು ಹೆದರಿ ನಿಂತಿದ್ದೆ. ಆಗ ಚಿದಮಬರಯ್ಯ ಅವರು ಕೈ ಹಿಡಿದು ನೀರು ಬೀಳುವ ಜಾಗಕ್ಕೆ ನನ್ನನ್ನು ರಿಸ್ಕ ಪಾಯಿಂಟ್ ಗೆ ಕರೆದೊಯ್ದರು. ಪುಟ್ಟ ಮಕ್ಕಳು ಪ್ರವಾಸ ಹೋದಂತೆ ನಮಗೆ ಅನುಭವ ನೀಡಿತು. ಇದು ಅವರ ಸಾಹಸ ಪ್ರವೃತ್ತಿಯನ್ನು ತೋರಿಸುತ್ತದೆ. ಇನ್ನು ಕುವೆಂಪು ವಿಚಾರದ ಬಗ್ಗೆ ಚರ್ಚಿಸುವಾ ಎಂ.ಹೆಚ್.ಕೃಷ್ಣಯ್ಯ ಅವರು ಅನಿಕೇತನದ ಬಗ್ಗೆ ಮಾತನಾಡುತ್ತಾ ತೇಜಸ್ವಿ ಅದನ್ನು ಹೇಗೆ ವ್ಯಾಖ್ಯಾನಿಸಿದ್ದಾರೆ ಎಂದು ಮಾತನಾಡುತ್ತಿದ್ದರು. ಆಗ ಚಿದಂಬರಯ್ಯ ಅವರು ನಾನು ಹೆಚ್ಚು ಓದಿಲ್ಲ,ಆದರೆ ಕುವೆಂಪು ಎಲ್ಲವನ್ನೂ ತೊರೆದು ಹೇಗೆ ಮಾನವೀಯತೆಯನ್ನು ಮೈಗೂಡಿಸಿಕೊಳ್ಳಬೇಕು ಎಂದು ಹೇಳಿರುವುದನ್ನು ಪ್ರಸ್ತಾಪಿಸಿದರು. ಇದು ವಿಶ್ವ ವಿದ್ಯಾಲಯದಲ್ಲಿ ಭಾಷಾ ಅಧ್ಯಯನ ಮಾಡಿದವರಿಗಿಂತಲೂ ಹೆಚ್ಚಿನ ವಿವೇಕ ಅವರಿರುವುದನ್ನು ತೋರಿಸಿತ್ತು. ಅವರ ತಂದೆ ಸ್ವಾತಂತ್ರ ಹೋರಾಟಗಾರರಾಗಿ ಅಸ್ಪೃಷ್ಯರೊಂದಿಗೆ ಊಟ ಬಡಿಸದಿದ್ದರೆ ಊಟವನ್ನೇ ಮಾಡುತ್ತಿರಲಿಲ್ಲವಂತೆ. ಅದೇ ಗುಣ ಚಿದಂಬರಯ್ಯ ಅವರಲ್ಲಿಯೂ ಬೆಳೆದಿತ್ತು. ಅವರ ಮನೆಯಲ್ಲಿ ಯಾವುದೇ ರೀತಿಯ ಬೇದ ಭಾವಕ್ಕೆ ಎಡೆಯಿರಲಿಲ್ಲ.
-ಕೆ.ದೊರೆರಾಜ್,
ನಿವೃತ್ತ ಪ್ರಾಂಶುಪಾಲರು