ಜಾಗತೀಕರಣದಿಂದ ಮಹಿಳೆಯಲ್ಲಿ ಇಬ್ಬಂದಿತನ
ಉದಯವಾಣಿ – ರ., ೨೩ ಫೆಬ್ರವರೀ, ೨೦೧೪
ದೊಡ್ಡಬಳ್ಳಾಪುರ: ಜಾಗತೀಕರಣದ ಪ್ರಭಾವದಿಂದ ಮಹಿಳೆಯರು ಇಬ್ಬಂದಿತನಕ್ಕೆ ಸಿಲುಕುವಂತಾಗಿದೆ ಎಂದು ಮಾಜಿ ಸಚಿವೆ ಬಿ.ಟಿ.ಲಲಿತಾನಾಯ್ಕ ಹೇಳಿದರು.
ನಗರದ ಬೆಸೆಂಟ್ ಪಾರ್ಕ್ನಲ್ಲಿ ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ಹೊರ ತರುತ್ತಿರುವ ಶಿಕ್ಷಣ ಶಿಲ್ಪಿ ಟೀಚರ್ ಶೈಕ್ಷಣಿಕ ಮಾಸಪತ್ರಿಕೆಯ 23ನೇ ವಾರ್ಷಿಕೋತ್ಸವ ಹಾಗೂ ರಾಜ್ಯ ಮಟ್ಟದ ಶೈಕ್ಷಣಿಕ ಸಮ್ಮಿಲನ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.
ಆಧುನೀಕರಣದ ಕೊಳ್ಳುಬಾಕ ಸಂಸ್ಕೃತಿಯಿಂದ ಹೊರಬಾರದ ಹೊರತು ನೆಮ್ಮದಿಯ ಜೀವನ ಸಾಧ್ಯವಿಲ್ಲ. ಇವತ್ತು ಹೆಣ್ಣು ಮಕ್ಕಳಿಗೆ ಇರುವ ದೊಡ್ಡ ಸವಾಲು ಆಡಂಬರದ ವಿವಾಹಗಳು. ಇದರಿಂದಾಗಿ ಸರಳ ಜೀವನ ಕ್ರಮ ಹಾಗೂ
ಸರಳ ವಿವಾಹಗಳಿಗೆ ಹೆಚ್ಚಿನ ಒತ್ತು ನೀಡಬೇಕಿದೆ. ಜನ ನಿಶ್ಚಿಂತೆಯಿಂದ ಬದುಕುವುದನ್ನು ಕಲಿಯಬೇಕು. ಆಗ ಮಾತ್ರ ನೆಮ್ಮದಿಯ ಜೀವನ ಸಾಧ್ಯ ಎಂದರು.
ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಶಿಕ್ಷಕ ಹಾಗೂ ಪವಾಡ ಸಂಶೋಧನಾ ಕೇಂದ್ರದ ಕಾರ್ಯದರ್ಶಿ ಹುಲಿಕಲ್ ನಟರಾಜ್ಅವರ ಕಲ್ಲುಮುಳ್ಳಿನ ಹಾದಿ ಪುಸ್ತಕ ಬಿಡುಗಡೆ ಮಾತನಾಡಿದ ಪಬ್ಲಿಕ್ ಟಿವಿ ಮುಖ್ಯಸ್ಥ ಎಚ್.ಆರ್.ರಂಗನಾಥ್, ಜನರಲ್ಲಿ ಮೂಡ ನಂಬಿಕೆ ಮೂಡಿಸುವುದು ಸುಲಭ. ಆದರೆ ವೈಜ್ಞಾನಿಕ,ವೈಚಾರಿಕ ಚಿಂತನೆ, ವೈಚಾರಿಕ ಮನೋಭಾವ ಮೂಡಿಸುವುದು ಸವಾಲಿನ ಕೆಲಸ. ಇಂತಹ ಕಷ್ಟಸಾದ್ಯವಾದ ಕೆಲಸವನ್ನು ಒಬ್ಬಂಟಿಯಾಗಿ ನಡೆಸುತ್ತಿರುವ ಹುಲಿಕಲ್ ನಟರಾಜ್ ಅವರ ಕೆಲಸ ಶ್ಲಾಘನೀಯ. ಈ ಕೆಲಸದ ಹಾದಿಯಲ್ಲಿ ಅವರು ಕಂಡಿರುವ ಕಷ್ಟಗಳ ಅನಾವರಣ ಕಲ್ಲುಮುಳ್ಳಿನ ಹಾದಿ ಪುಸ್ತಕದಲ್ಲಿದೆ ಎಂದು ಹೇಳಿದರು.
ಸಮಾರಂಭದಲ್ಲಿ ಶಾಸಕ ಟಿ.ವೆಂಕಟರಣಯ್ಯ, ಜಿಪಂ ಉಪಾಧ್ಯಕ್ಷ ಎನ್.ಹನುಮಂತೇಗೌಡ, ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಶಿವರಾಜ್, ತಾಪಂ ಸದಸ್ಯ ಡಾ.ಎಚ್.ಜಿ. ವಿಜಯ್ಕುಮಾರ್, ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಗುರುರಾಜ್, ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ರಾಜ್ಯ ಅಧ್ಯಕ್ಷ ಎಚ್.ಆರ್.ರಾಮಕೃಷ್ಣರಾವ್, ಕಾರ್ಯದರ್ಶಿ ಈ.ಬಸವರಾಜು, ಎಂಎಬಿಎಲ್ ವಿದ್ಯಾ ಸಂಸ್ಥೆ ಕಾರ್ಯದರ್ಶಿ ಎಂ.ಬಿ.ಗುರುದೇವ್, ಕ್ಷೇತ್ರ ಶಿಕ್ಷಣಾಧಿಕಾರಿ ಎಚ್.ಎನ್.ತಿಮ್ಮೇಗೌಡ, ಮಾನವ ಹಕ್ಕುಗಳ ಜಾಗೃತಿ ಸಮಿತಿ ರಾಜ್ಯ ಅಧ್ಯಕ್ಷ ಲಕ್ಷ್ಮಣ್ಸಿಂಗ್ ಮತ್ತಿತರರಿದ್ದರು.
ದೊಡ್ಡಬಳ್ಳಾಪುರ: ಜಾಗತೀಕರಣದ ಪ್ರಭಾವದಿಂದ ಮಹಿಳೆಯರು ಇಬ್ಬಂದಿತನಕ್ಕೆ ಸಿಲುಕುವಂತಾಗಿದೆ ಎಂದು ಮಾಜಿ ಸಚಿವೆ ಬಿ.ಟಿ.ಲಲಿತಾನಾಯ್ಕ ಹೇಳಿದರು.
ನಗರದ ಬೆಸೆಂಟ್ ಪಾರ್ಕ್ನಲ್ಲಿ ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ಹೊರ ತರುತ್ತಿರುವ ಶಿಕ್ಷಣ ಶಿಲ್ಪಿ ಟೀಚರ್ ಶೈಕ್ಷಣಿಕ ಮಾಸಪತ್ರಿಕೆಯ 23ನೇ ವಾರ್ಷಿಕೋತ್ಸವ ಹಾಗೂ ರಾಜ್ಯ ಮಟ್ಟದ ಶೈಕ್ಷಣಿಕ ಸಮ್ಮಿಲನ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.
ಆಧುನೀಕರಣದ ಕೊಳ್ಳುಬಾಕ ಸಂಸ್ಕೃತಿಯಿಂದ ಹೊರಬಾರದ ಹೊರತು ನೆಮ್ಮದಿಯ ಜೀವನ ಸಾಧ್ಯವಿಲ್ಲ. ಇವತ್ತು ಹೆಣ್ಣು ಮಕ್ಕಳಿಗೆ ಇರುವ ದೊಡ್ಡ ಸವಾಲು ಆಡಂಬರದ ವಿವಾಹಗಳು. ಇದರಿಂದಾಗಿ ಸರಳ ಜೀವನ ಕ್ರಮ ಹಾಗೂ
ಸರಳ ವಿವಾಹಗಳಿಗೆ ಹೆಚ್ಚಿನ ಒತ್ತು ನೀಡಬೇಕಿದೆ. ಜನ ನಿಶ್ಚಿಂತೆಯಿಂದ ಬದುಕುವುದನ್ನು ಕಲಿಯಬೇಕು. ಆಗ ಮಾತ್ರ ನೆಮ್ಮದಿಯ ಜೀವನ ಸಾಧ್ಯ ಎಂದರು.
ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಶಿಕ್ಷಕ ಹಾಗೂ ಪವಾಡ ಸಂಶೋಧನಾ ಕೇಂದ್ರದ ಕಾರ್ಯದರ್ಶಿ ಹುಲಿಕಲ್ ನಟರಾಜ್ಅವರ ಕಲ್ಲುಮುಳ್ಳಿನ ಹಾದಿ ಪುಸ್ತಕ ಬಿಡುಗಡೆ ಮಾತನಾಡಿದ ಪಬ್ಲಿಕ್ ಟಿವಿ ಮುಖ್ಯಸ್ಥ ಎಚ್.ಆರ್.ರಂಗನಾಥ್, ಜನರಲ್ಲಿ ಮೂಡ ನಂಬಿಕೆ ಮೂಡಿಸುವುದು ಸುಲಭ. ಆದರೆ ವೈಜ್ಞಾನಿಕ,ವೈಚಾರಿಕ ಚಿಂತನೆ, ವೈಚಾರಿಕ ಮನೋಭಾವ ಮೂಡಿಸುವುದು ಸವಾಲಿನ ಕೆಲಸ. ಇಂತಹ ಕಷ್ಟಸಾದ್ಯವಾದ ಕೆಲಸವನ್ನು ಒಬ್ಬಂಟಿಯಾಗಿ ನಡೆಸುತ್ತಿರುವ ಹುಲಿಕಲ್ ನಟರಾಜ್ ಅವರ ಕೆಲಸ ಶ್ಲಾಘನೀಯ. ಈ ಕೆಲಸದ ಹಾದಿಯಲ್ಲಿ ಅವರು ಕಂಡಿರುವ ಕಷ್ಟಗಳ ಅನಾವರಣ ಕಲ್ಲುಮುಳ್ಳಿನ ಹಾದಿ ಪುಸ್ತಕದಲ್ಲಿದೆ ಎಂದು ಹೇಳಿದರು.
ಸಮಾರಂಭದಲ್ಲಿ ಶಾಸಕ ಟಿ.ವೆಂಕಟರಣಯ್ಯ, ಜಿಪಂ ಉಪಾಧ್ಯಕ್ಷ ಎನ್.ಹನುಮಂತೇಗೌಡ, ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಶಿವರಾಜ್, ತಾಪಂ ಸದಸ್ಯ ಡಾ.ಎಚ್.ಜಿ. ವಿಜಯ್ಕುಮಾರ್, ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಗುರುರಾಜ್, ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ರಾಜ್ಯ ಅಧ್ಯಕ್ಷ ಎಚ್.ಆರ್.ರಾಮಕೃಷ್ಣರಾವ್, ಕಾರ್ಯದರ್ಶಿ ಈ.ಬಸವರಾಜು, ಎಂಎಬಿಎಲ್ ವಿದ್ಯಾ ಸಂಸ್ಥೆ ಕಾರ್ಯದರ್ಶಿ ಎಂ.ಬಿ.ಗುರುದೇವ್, ಕ್ಷೇತ್ರ ಶಿಕ್ಷಣಾಧಿಕಾರಿ ಎಚ್.ಎನ್.ತಿಮ್ಮೇಗೌಡ, ಮಾನವ ಹಕ್ಕುಗಳ ಜಾಗೃತಿ ಸಮಿತಿ ರಾಜ್ಯ ಅಧ್ಯಕ್ಷ ಲಕ್ಷ್ಮಣ್ಸಿಂಗ್ ಮತ್ತಿತರರಿದ್ದರು.
No comments:
Post a Comment