Wednesday, January 9, 2013

ಶಿಕ್ಷಣ ಶಿಲ್ಪಿ ಶೈಕ್ಷಣಿಕ ಮಾಸಪತ್ರಿಕೆ

ಪತ್ರಿಕೆ ಪ್ರಾರಂಭೋತ್ಸವ ಹಾಗೂ
ರಾಜ್ಯ ಮಟ್ಟದ ಶೈಕ್ಷಣಿಕ ಸಮಾವೇಶ
ದಿನಾಂಕ: ೧೬ ಮತ್ತು ೧೭, ಫೆಬ್ರವರಿ ೨೦೧೩
ಸ್ಥಳ: ಕೆ.ಆರ್.ನಗರ, ಮೈಸೂರು ಜಿಲ್ಲೆ.

ಶಿಕ್ಷಣ ಕ್ಷೇತ್ರ ನಿರಂತರ ಬದಲಾವಣೆಗೊಳಪಡುತ್ತಿದೆ. ಸಾಮಾಜಿಕ, ಆರ್ಥಿಕ  ಹಾಗೂ ತಾಂತ್ರಿಕ ಬೆಳವಣಿಗೆಗಳಿಗೆ ಅನುಸಾರವಾಗಿ ಶಿಕ್ಷಣ ಕ್ಷೇತ್ರವೂ ಬದಲಾವಣೆಗೆ ತೆರೆದುಕೊಳ್ಳಬೇಕಾಗುತ್ತದೆ.

ಇಂಥ ಬದಲಾವಣೆಗಳ ಬಗ್ಗೆ ಶಿಕ್ಷಕರು, ವಿದ್ಯಾರ್ಥಿಗಳು ಹಾಗೂ ಪೋಷಕರ ಗಮನ ಸೆಳೆಯುವ, ಅವರನ್ನು ಪ್ರಕ್ರಿಯೆಯಲ್ಲಿ ಒಳಗೊಳ್ಳವ ಉದ್ದೇಶದೊಂದಿಗೆ ಶಿಕ್ಷಣ ಶಿಲ್ಪಿ ಶೈಕ್ಷಣಿಕ ಮಾಸ ಪತ್ರಿಕೆ ಹೊರ ಬರುತ್ತಿದೆ. ಬಹಳ ಮುಖ್ಯವಾಗಿ ಕ್ಷೀಣಿಸುತ್ತಿರುವ ಸಾರ್ವಜನಿಕ ಶಿಕ್ಷಣ ವ್ಯವಸ್ಥೆಯನ್ನು ಬಲಪಡಿಸುವ ದಿಶೆಯಲ್ಲಿ ಶಿಕ್ಷಣ ಶಿಲ್ಪಿ ಕೆಲಸ ಮಾಡಲಿದೆ. ಮಕ್ಕಳ ಶಿಕ್ಷಣಕ್ಕಾಗಿ ಬದ್ಧತೆಯುಳ್ಳ ಶಿಕ್ಷಕರ ಒಂದು ಪಡೆಯನ್ನೇ ಹೊಂದಿರುವ ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ಈ ಪತ್ರಿಕೆಯನ್ನು ಹೊರ ತರುತ್ತಿದೆ. ಬಹುಭಾಗ ಶಿಕ್ಷಕರನ್ನೇ ಕೇಂದ್ರವನ್ನಾಗಿಟ್ಟುಕೊಂಡು ಪತ್ರಿಕೆ ಪ್ರಕಟಗೊಳ್ಳುತ್ತಿದೆ.

ಪತ್ರಿಕೆಯ ಬಿಡುಗಡೆ ಹಾಗೂ ರಾಜ್ಯ ಮಟ್ಟದ ಶೈಕ್ಷಣಿಕ ಸಮಾವೇಶ ೨೦೧೩ರ ಫೆಬ್ರವರಿ ೧೬ ಮತ್ತು ೧೭ ರಂದು ಮೈಸೂರು ಜಿಲ್ಲೆಯ ಕೆ.ಆರ್.ನಗರದಲ್ಲಿ ನಡೆಯಲಿದೆ. ಪ್ರಸ್ತುತ ಸುವರ್ಣ ಮಹೋತ್ಸವವನ್ನು ಆಚರಿಸಿಕೊಳ್ಳುತ್ತಿರುವ ಕೆ.ಆರ್.ನಗರ (ಕೃಷ್ಣರಾಜನಗರ) ದಲ್ಲಿ ಈ ಸಮಾವೇಶ ನಡೆಯುತ್ತಿರುವುದು ವಿಶೇಷವೆಂದೇ ಹೇಳಬಹುದು.

ಸಮಾವೇಶವನ್ನು ಬೆಂಗಳೂರಿನ ನಿಡುಮಾಮಿಡಿ ಮಠದ ಶಿವಾಯತ ಧರ್ಮಗುರು ಶ್ರೀ ವೀರಭದ್ರ ಚನ್ನಮಲ್ಲಸ್ವಾಮೀಜಿ ಯವರು ಉದ್ಘಾಟಿಸಲಿದ್ದು ಶಿಕ್ಷಣ ಇಲಾಖೆಯ ಅಧಿಕಾರಿಗಳು, ಶಿಕ್ಷಣ ತಜ್ಞರು ಭಾಗವಹಿಸಲಿದ್ದಾರೆ. ಉದ್ಘಾಟನಾ ಸಮಾರಂಭದಲ್ಲಿ ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ಪ್ರಕಟಿಸಿರುವ ೧೦ ಪುಸ್ತಕಗಳು ಬಿಡುಗಡೆಯಾಗಲಿವೆ.

ಉದ್ಘಾಟನಾ ಸಮಾರಂಭದ ನಂತರ ಮಧ್ಯಾಹ್ನದ ಮೊದಲ ಗೋಷ್ಠಿಯಲ್ಲಿ ರಾಜ್ಯದ ವಿವಿಧ ರಾಜಕೀಯ ಪಕ್ಷದ ಮುಖಂಡರನ್ನು ಆಹ್ವಾನಿಸಿ ಸಾರ್ವಜನಿಕ ಶಿಕ್ಷಣ-ನಮ್ಮ ಬದ್ಧತೆ  ಕುರಿv ಗೋಷ್ಠಿಯನ್ನು ಏರ್ಪಡಿಸಿದೆ. ರಾಜ್ಯದ ಪ್ರಮುಖ ರಾಜಕೀಯ ಪಕ್ಷಗಳ ಮುಖಂಡರು ಭಾಗವಹಿಸಿ ಸಾರ್ವಜನಿಕ ಶಿಕ್ಷಣವನ್ನು ಉತ್ತಮಪಡಿಸಲು ತಮ್ಮ ಪಕ್ಷ ತೆಗೆದುಕೊಳ್ಳುವ ನಿಲುವುಗಳ ಬಗ್ಗೆ ವಿವರಿಸಲಿದ್ದಾರೆ. ಸಂಜೆ ಶಿಕ್ಷಣ ಹಕ್ಕು ಮಸೂದೆ ಕುರಿತ ಗೋಷ್ಟಿ ನಡೆಯಲಿದೆ. ಈ ವಿಷಯ ಪ್ರಸ್ತುತ ಹೆಚ್ಚಿನ ಚರ್ಚೆಯಲ್ಲಿದೆ. ಮೈಸೂರಿನ ಶಾರದಾ ವಿಲಾಸ ಶಿಕ್ಷಣ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಪ್ರೊ.ಉಮೇಶ್ ಮಾತನಾಡಲಿದ್ದಾರೆ.

ರಾತ್ರಿ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಮೈಸೂರಿನ ಖ್ಯಾತ ಕಲಾವಿದ ಜನಾರ್ಧನ್(ಜನ್ನಿ) ಅವರಿಂದ ಹಾಡುಗಳು ಜೊತೆಗೆ ಹುಲಿಕಲ್ ನಟರಾಜ್ ಅವರಿಂದ ಪವಾಡಗಳ ರಹಸ್ಯ ಬಯಲು.

೧೭.೦೨.೨೦೧೩ ರ ಬೆಳಿಗ್ಗೆ ಸಮಗ್ರ ಹಾಗೂ ನಿರಂತರ ಮೌಲ್ಯಮಾಪನ ಕುರಿತು ಬೆಂಗಳೂರಿನ ಎಂ.ಇ.ಎಸ್ ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯರಾದ ಪ್ರೊ.ಗಣೇಶಭಟ್ಟ ಅವರು ಮಾತನಾಡಲಿದ್ದಾರೆ. ನಂತರ ಆರು ಸಮಾನಾಂತರ ಕಾರ್ಯಾಗಾರಗಳು ನಡೆಯಲಿವೆ. ಅವುಗಳೆಂದರೆ: ವಿಜ್ಞಾನ ಕಲಿಕೆ, ಗಣಿತದ  ಚಟುವಟಿಕೆಗಳು, ತರಗತಿಯಲ್ಲಿ ಪರಿಣಾಮಕಾರಿ ಸಂವಹನ, ಓರಿಗಾಮಿ, ಮಕ್ಕಳ ವಿಜ್ಞಾನ ಸಂಘಗಳನ್ನು ರಚಿಸಿ ನಡೆಸುವುದು ಹೇಗೆ? ಹಾಗೂ ಮಕ್ಕಳಿಗಾಗಿ ಬೇಸಿಗೆ ಶಿಬಿರಗಳು.
ಎರಡೂ ದಿನಗಳ ಕಾರ್ಯಕ್ರಮದಲ್ಲಿ ರಾಜ್ಯದ ಎಲ್ಲ ಜಿಲ್ಲೆಗಳಿಂದ ಸುಮಾರು ೧೦೦೦ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ. ಆಸಕ್ತಿಯುಳ್ಳ ಶಿಕ್ಷಕರು, ಶಿಕ್ಷಣಾಸಕ್ತರು ೨೦೦ರೂ ಪ್ರತಿನಿಧಿ ಶುಲ್ಕವನ್ನು ಪಾವತಿಸಿ ನೊಂದಾಯಿಸಿಕೊಳ್ಳಬಹುದಾಗಿದೆ. ಪ್ರತಿನಿಧಿಗಳಿಗೆ ಊಟ, ವಸತಿ ಹಾಗೂ ಸಮಾವೇಶದ ಬ್ಯಾಗ್ ನೀಡಲಾಗುವುದು.

ನೊಂದಾಯಿಸಿಕೊಳ್ಳಲು ಮಾಹಿತಿಗಾಗಿ: ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿಯ ರಾಜ್ಯ ಕಾರ್ಯದರ್ಶಿ ಈ.ಬಸವರಾಜು(9448957666), ಎಸ್.ಎಂ.ಶಶಿಧರ (9986214375) ರಾಜ್ಯ ಸಮಿತಿ ಸದಸ್ಯರಾದ ಶ್ರೀ ಎಂ.ಸಿ.ಡೋಂಗ್ರೆ, ಹಾಸನ (8861665252) ಮತ್ತು ಶ್ರೀ ಆರ್.ಉಮೇಶ್, ಹೊಳೆನರಸೀಪುರ(9242060395) ಇವರನ್ನು ಸಂಪರ್ಕಿಸಬಹುದಾಗಿದೆ. ಇಮೇಲ್ : karjvs@gmail.com
  
ವಂದನೆಗಳೊಂದಿಗೆ
ಈ.ಬಸವರಾಜು
ಕಾರ್ಯದರ್ಶಿ


View Larger Map

No comments:

Post a Comment