Friday, February 8, 2013

ಶೈಕ್ಷಣಿಕ ಸಮಾವೇಶ ೧೬ರಿಂದ

ಫೆಬ್ರವರಿ ೧೬ ಮತ್ತು ೧೭ರಂದು ಮೈಸೂರು ಜಿಲ್ಲೆ ಕೆ.ಅರ್. ನಗರದಲ್ಲಿ ಎರಡು ದಿನಗಳ ರಾಜ್ಯ ಮಟ್ಟದ ಶೈಕ್ಷಣಿಕ ಸಮಾವೇಶವನ್ನು ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ಹಮ್ಮಿ ಕೊಂಡಿದೆ.
ಈ ಸಮಾವೇಶದಲ್ಲಿ ಶಿಕ್ಷಣ ಹಕ್ಕು ಕಾಯಿದೆ, ನಿರಂತರ ಮೌಲ್ಯ ಮಾಪನ, ವಿಜ್ಞಾನ ಶಿಕ್ಷಣ, ಗಣಿತದ ಚಟುವಟಿಕೆಗಳು, ವಿಜ್ಞಾನ ಸಂಘ ಮುಂತಾದ ವಿಷಯಗಳ ಬಗ್ಗೆ ಶೈಕ್ಷಣಿಕ ಗೋಷ್ಟಿಗಳು ಜರುಗಲಿದ್ದು, ಸಮಾವೇಶದಲ್ಲಿ ಭಾಗವಹಿಸುವ ಶಿಕ್ಷಕರಿಗೆ ಅನ್ಯ ಕಾರ್ಯ ನಿಮಿತ್ತ ರಜೆಯನ್ನು ನಿರ್ದೇಶಕರು, ಸಂಶೋಧನೆ ಮತ್ತು ತರಬೇತಿ ಇಲಾಖೆ, ಬೆಂಗಳೂರು ಇವರು ಸುತ್ತೊಲೆಯನ್ನು ಹೊರಡಿಸಿದ್ದು, ಬಳ್ಳಾರಿ ಜಿಲ್ಲೆಯ ಆಸಕ್ತ ಶಿಕ್ಷಕರು, ವಿಜ್ಞಾನಾಸಕ್ತರು ಈ  ಸಮಾವೇಶದಲ್ಲಿ ಭಾಗವಹಿಸಬಹುದಾಗಿದೆ.
ಹೆಚ್ಚಿನ ಮಾಹಿತಿಗಾಗಿ ರಾಜ್ಯ ಜಂಟಿ ಕಾರ್ಯದರ್ಶಿ ಎಸ್. ಎಂ. ಶಶಿಧರ (ಮೋ. ೯೯೮೬೨೧೪೩೭೫) ಹಾಗೂ  ಟಿ.ಎಂ.ನಾಗಭೂಷಣ (ಮೋ. ೯೮೮೬೧೮೫೧೪೬) ಇವರನ್ನು ಸಂಪರ್ಕಿಸಲು ಕೋರಲಾಗಿದೆ.





No comments:

Post a Comment