ವಿಷಯ: ಶಿಕ್ಷಣ ಶಿಲ್ಪಿ ಪತ್ರಿಕೆಯ ಬಿಡುಗಡೆ ಹಾಗೂ ರಾಜ್ಯ ಮಟ್ಟದ ಶೈಕ್ಷಣಿಕ ಸಮ್ಮಿಲನ ಕಾರ್ಯಕ್ರಮಕ್ಕೆ ಆಗಮಿಸುವ ಬಗ್ಗೆ.
ತಮಗೆ ಈಗಾಗಲೇ ತಿಳಿದಿರುವಂತೆ ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿಯು “ಶಿಕ್ಷಣಶಿಲ್ಪಿ” ಎಂಬ ಶೈಕ್ಷಣಿಕ ಮಾಸಪತ್ರಿಕೆಯನ್ನು ಪ್ರಕಟಿಸುತ್ತಿದ್ದು ಪತ್ರಿಕೆಯ ಪ್ರಾರಂಭೋತ್ಸವ ಹಾಗೂ ರಾಜ್ಯಮಟ್ಟದ “ಶೈಕ್ಷಣಿಕ ಸಮ್ಮಿಲನ”À ಕಾರ್ಯಕ್ರಮವನ್ನು ದಿನಾಂಕ 16 ಮತ್ತು 17 ಫೆಬ್ರವರಿ 2013 ರಂದು ಕೆ.ಆರ್.ನಗರದಲ್ಲಿ ನಡೆಸಲಾಗುತ್ತಿದೆ. ಈ ಕಾರ್ಯಕ್ರಮಕ್ಕೆ ಸಂಬಂಧಿಸಿದ ವಿವರಗಳಿಗಾಗಿ ಕರಪತ್ರಗಳನ್ನು ಕಳಿಸುತ್ತಿದ್ದೇವೆ.
ತಾವು ಈ ಕರಪತ್ರಗಳನ್ನು ತಮ್ಮ ಗೆಳೆಯರು, ಕೆಜೆವಿಎಸ್ ಸದಸ್ಯರು, ಕರಾವಿಪ ಸದಸ್ಯರು, ಶಿಕ್ಷಣಾಸಕ್ತರು, ಎಸ್ಡಿಎಂಸಿ ಸದಸ್ಯರು, ಎನ್.ಜಿ.ಒ ಪ್ರತಿನಿಧಿಗಳಿಗೆ ನೀಡಿ ಅವರನ್ನು ಕಾರ್ಯಕ್ರಮಕ್ಕೆ ಪ್ರತಿನಿಧಿಗಳಾಗಿ ನೊಂದಾಯಿಸಲು ಕೋರಿದೆ. ಪ್ರತಿನಿಧಿಗಳು 200ರೂಗಳನ್ನು ನೀಡಿ ನೊಂದಾಯಿಸಿಕೊಳ್ಳಬೇಕು. ನೊಂದಾಯಿಸಲು ಈ ಪತ್ರದೊಂದಿಗೆ ರಶೀದಿ ಪುಸ್ತಕವನ್ನು ಕಳಿಸಲಾಗಿದೆ. ಅವರಿಗೆ ಒಂದು ಬ್ಯಾಗ್, ಪೆನ್, ಪ್ಯಾಡ್ ಜೊತೆಗೆ ಊಟ, ವಸತಿಯ ವ್ಯವಸ್ಥೆಯನ್ನು ಮಾಡಲಾಗುವುದು. ಪ್ರತಿನಿಧಿಗಳು ತಮ್ಮ ಪ್ರಯಾಣದ ವ್ಯವಸ್ಥೆಯನ್ನು ಮಾಡಿಕೊಂಡು ಬರಬೇಕಾಗುತ್ತದೆ. ಶಿಕ್ಷಕರಿಗೆ ಒ.ಒ.ಡಿ ಸೌಲಭ್ಯವಿದ್ದು ಪ್ರತಿಯನ್ನು ಲಗತ್ತಿಸಿದೆ.
ಧಾರವಾಡ, ಬೆಳಗಾವಿ, ಗದಗ್, ಬಿಜಾಪುರ, ಬಾಗಲಕೋಟೆ, ಹಾವೇರಿ, ದಾವಣಗೆರೆ ಜಿಲ್ಲೆಗಳವರು ಧಾರವಾಡ-ಮೈಸೂರು ಎಕ್ಸ್ ಪ್ರೆಸ್ ರೈಲಿನಲ್ಲಿ ಬರಬಹುದು. ಶಿವಮೊಗ್ಬದವರು ಶಿವಮೊಗ್ಗ-ಮೈಸೂರು ರೈಲಿನಲ್ಲಿ, ಮಂಗಳೂರು, ಉಡುಪಿ ಕಡೆಯಿಂದ ಬರುವವರು ಕಣ್ಣೂರು-ಯಶವಂತಪುರ ರೈಲಿನಲ್ಲಿ, ಬೀದರ್, ಗುಲ್ಬರ್ಗ, ರಾಯಚೂರು, ಬಳ್ಳಾರಿ ಜಿಲ್ಲೆಯವರು ಬೆಂಗಳೂರಿಗೆ ರೈಲಿನಲ್ಲಿ ಬಂದು ಅಲ್ಲಿಂದ ಮೈಸೂರಿಗೆ ಬರಬಹುದು.
ಕೆ.ಆರ್.ನಗರದ ಮಾಹಿತಿಗಾಗಿ: ಶ್ರೀ ಕೆ.ಹೆಚ್.ಗಿರೀಶ್-9731136918, ಎಂ.ಎಸ್.ಲಕ್ಷ್ಮೀಕಾಂತ್-9448780357, ಆನಂದ್-8722393456, ಕೆ.ಬಿ.ವಿಶ್ವನಾಥ್-8880603038 ಇವರುಗಳನ್ನು ಸಂಪರ್ಕಿಸಲು ಕೋರಿದೆ.
ವಂದನೆಗಳೊಂದಿಗೆ
ತಮ್ಮ ವಿಶ್ವಾಸಿ
ಈ.ಬಸವರಾಜು
ಕಾರ್ಯದರ್ಶಿ
No comments:
Post a Comment