Monday, June 4, 2012

ಕನ್ನಡ ಪ್ರಭ: ಶುಕ್ರ ಸಂಕ್ರಮ ವೀಕ್ಷಿಸಿ


‘೬ರಂದು ಆಕಾಶದಲ್ಲಿ ಶುಕ್ರ ಸಂಕ್ರಮ ವೀಕ್ಷಿಸಿ’


ಕನ್ನಡಪ್ರಭ ವಾರ್ತೆಹೊಸಪೇಟೆಜೂ.

ಆಕಾಶದಲ್ಲಿ ಅಪರೂಪವಾಗಿ ಮೂಡುವಂತಹ ಶುಕ್ರ ಸಂಕ್ರಮವು ಜೂನ್ ೬ರಂದು  ಸಂಭವಿಸಲಿದ್ದುಅದನ್ನು ವೀಕ್ಷಿಸುವ ಅಪೂರ್ವ ಅವಕಾಶ ಕಳೆದುಕೊಳ್ಳಬೇಡಿ ಎಂದು ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿಯ ರಾಜ್ಯ ಸಮಿತಿ ಸಹ ಕಾರ್ಯದರ್ಶಿ ಪ್ರೊಎಸ್.ಎಂಶಶಿಧರ ಕರೆ ನೀಡಿದರು.

ನಗರದ ಪ್ರೌಢದೇವರಾಯ ತಾಂತ್ರಿಕ ಮಹಾವಿದ್ಯಾಲಯ ಹಾಗೂ ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ಬಳ್ಳಾರಿ ಜಿಲ್ಲಾ ಘಟಕ ಆಶ್ರಯದಲ್ಲಿ ನಡೆದ ಶುಕ್ರ ಸಂಕ್ರಮ ಕುರಿತ ಒಂದು ದಿನದ ಕಾರ್ಯಗಾರದಲ್ಲಿ ಸಂಪನ್ಯೂಲ ವ್ಯಕ್ತಿಗಳಾಗಿ ಮಾತನಾಡಿದರು.

ಈವರೆಗೆ ೭ ಶುಕ್ರ ಸಂಕ್ರಮಜೂನ್ ೬ರಂದು ಸೂರ್ಯೋದಯದಿಂದ ಪ್ರಾರಂಭಿಸಿ ಬೆಳಗ್ಗೆ ೧೦-೨೦ರ ವರೆಗೆ ಶುಕ್ರ ಗ್ರಹ ಸೂರ್ಯನ ಮುಂದೆ ಹಾದು ಹೋಗಲಿದ್ದುಇದನ್ನು ಶುಕ್ರ ಸಂಕ್ರಮ ಎನ್ನಲಾಗುತ್ತದೆಇದೊಂದು ಅಪರೂಪದ ಖಗೋಳ ವಿದ್ಯಮಾನವಾಗಿದೆದೂರದರ್ಶಕದ ಶೋಧನೆಯ ನಂತರ ಇತಿಹಾಸದಲ್ಲಿ ಏಳು ಬಾರಿ ಮಾತ್ರ ಶುಕ್ರ ಸಂಕ್ರಮ ವೀಕ್ಷಣೆಗೆ ಲಭ್ಯವಾಗಿದೆಶತಮಾನಕ್ಕೂ ಮೀರಿದ ಅವಧಿಯಲ್ಲಿ ಜೋಡಿಯಾಗಿ (ಎಂಟು ವರ್ಷಗಳ ಮಧ್ಯಂತರ ಅವಧಿಯಂತೆಶುಕ್ರ ಸಂಕ್ರಮ ಸಂಭವಿಸುತ್ತದೆ ಎಂದು ಅವರು ವಿವರಿಸಿದರು.

ಮುಂದಿನ ಶುಕ್ರ ಸಂಕ್ರಮ ೨೧೧೭ರಲ್ಲಿಈ ಹಿಂದಿನ ಸಂಕ್ರಮಗಳು ಕ್ರಮವಾಗಿ ೧೬೩೧ ಮತ್ತು ೧೬೩೯೧೭೬೧ ಮತ್ತು ೧೭೬೯ ೧೮೭೪ ಮತ್ತು ೧೮೮೨ಈಚೆಗೆ ೨೦೦೪ರಲ್ಲಿ ಸಂಭವಿಸಿರುತ್ತವೆಶುಕ್ರ ಸಂಕ್ರಮ ಸಂಭವಿಸುವಾಗ ಒಬ್ಬ ಶಾಲಾ ಬಾಲಕ ಕೂಡ ಸೂರ್ಯ ಮತ್ತು ಭೂಮಿಯ ನಡುವಿನ ದೂರವನ್ನು ಸುಲಭವಾಗಿ ಅಳೆಯಬಹುದುವಿಪರ್ಯಾಸವೆಂದರೆ ಐಸಾಕ್ ನ್ಯೂಟನ್ನನೂ ಸೇರಿದಂತೆ ಪ್ರಮುಖ ವಿಜ್ಞಾನಿಗಳು ಶುಕ್ರ ಸಂಕ್ರಮ ವೀಕ್ಷಿಸಲು ಜೀವಮಾನವಿಡೀ ಕುತೂಹಲಿಗಳಾಗಿದ್ದರು.ಆದರೆಅದು ಸಾಧ್ಯವಾಗಲಿಲ್ಲಇಂಥ ಅಪೂರ್ವ ಅವಕಾಶ ನಮಗೆ ದೊರೆತಿದೆಇದು ನಮಗೂ ಕೊನೆಯ ಅವಕಾಶಈ ಶತಮಾನದ ಕೊನೆಯ ಘಟನೆಮುಂದಿನ ಶುಕ್ರ ಸಂಕ್ರಮವು ೧೦೫ ವರ್ಷಗಳ ನಂತರ ಅಂದರೆ ೨೧೧೭ರಲ್ಲಿ ನೋಡಲು ಸಾಧ್ಯ ಎಂದು ಅವರು ವಿವರಿಸಿದರು.

ಸೌರಕನ್ನಡಕ ಮೂಲಕ ವೀಕ್ಷಿಸಿಶುಕ್ರ ಸಂಕ್ರಮ ವೀಕ್ಷಿಸುವ ಸಂದರ್ಭದಲ್ಲಿ ಪ್ರಖರ ಸೂರ್ಯ ಕಿರಣಗಳಿಂದ ಕಣ್ಣಿಗೆ ಹಾನಿಯಾಗದಂತೆ ಸೂಕ್ತ ರಕ್ಷಣಾ ವಿಧಾನಗಳನ್ನು ಅವರು ಸೂಚಿಸಿದರುವೈಜ್ಞಾನಿಕವಾಗಿ ತಯಾರಿಸಿ ದೃಢೀಕರಿಸಲ್ಪಟ್ಟ ಸೌರಕನ್ನಡಕಗಳ ಮೂಲಕ ಸುರಕ್ಷಿತವಾಗಿ ಶುಕ್ರ ಸಂಕ್ರಮ ವೀಕ್ಷಿಸಬಹುದುಇಂತಹ ಕನ್ನಡಕಗಳ ಮೂಲಕ ಶುಕ್ರಗ್ರಹವು ಸೂರ್ಯನನ್ನು ದಾಟುವ ದೃಶ್ಯವನ್ನು ಸ್ಪಷ್ಟವಾಗಿ ವೀಕ್ಷಿಸಬಹುದುಸಾಮಾನ್ಯ ಕನ್ನಡಿಯನ್ನು ಬಳಸಿ ಸೂರ್ಯ ಬಿಂಬವನ್ನು ಕತ್ತಲ ಕೋಣೆಯಲ್ಲಿ ಮೂಡಿಸಿ ಸುರಕ್ಷಿತವಾಗಿ ಶುಕ್ರ ಸಂಕ್ರಮವನ್ನು ವೀಕ್ಷಿಸಬಹುದು ಎಂದು ಅವರು ಹೇಳಿದರು.

ಪ್ರಾಚಾರ್ಯ ಡಾ.ಪಿಖಗೇಶನ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿಖಗೋಳ ಶಾಸ್ತ್ರವು ಅನೇಕ ವಿಸ್ಮಯಗಳ ಆಗರವಾಗಿದ್ದುಮಕ್ಕಳಲ್ಲಿ ಆಕಾಶ ವೀಕ್ಷಣೆಯ ಆನಂದ ಆಸಕ್ತಿ ತುಂಬಬೇಕುವಿದ್ಯಾರ್ಥಿಗಳು ತಮ್ಮ ವಿದ್ಯಾಭ್ಯಾಸದ ಸಂದರ್ಭದಲ್ಲಿ ವೈಜ್ಞಾನಿಕ ಮನೋಭಾವನೆ ರೂಡಿಸಿಕೊಳ್ಳಬೇಕು ಎಂದು ಅವರು ಹೇಳಿದರು.

ಚೇತನ ಸಾಹಿತ್ಯ ಸಂಸ್ಥೆ ಹಾಗೂ ಕರ್ನಾಟಕ ಸಾಂಸ್ಕೃತಿಕ ಸಂಸ್ಥೆ ಸದಸ್ಯ ಪ್ರಭಾಕರ ಕೆಂದೂಳಿಯವರು ಮಾತನಾಡಿತಂತ್ರಜ್ಞಾನ ಅಬ್ಬರದ ನಡುವೆ ಇಂತಹ ಕಾರ್ಯಕ್ರಮಗಳು ಮೂಲ ವಿಜ್ಞಾನದ ಬಗ್ಗೆ ಆಸಕ್ತಿ ಮೂಡಿಸುವಲ್ಲಿ ನೆರವಾಗಲಿದೆ ಎಂದು ಅವರು ಹೇಳಿದರು.

ಪಿಡಿಐಟಿಯ ಪ್ರಾಧ್ಯಾಪಕ ಪ್ರೊವಸಂತಮ್ಮ ಹಾಗೂ ಪಾರ್ವತಿ ಕಡ್ಲಿಯವರುಬಿ.ಎಂಶ್ರೀನಾಥ ಸಭೆಯಲ್ಲಿ ಇದ್ದರುಅಧ್ಯಾಪಕಿ ಸುಮಲತಾ ಸ್ವಾಗತಿಸಿದರುಫಿರ್‌ದೋಶ್ ಪರವೀನ್ ನಿರೂಪಿಸಿದರುಟಿ.ಎಂ.ನಾಗಭೂಷಣ ವಂದಿಸಿದರು.

No comments:

Post a Comment